ಹರ್ಷಾ ಭೋಗ್ಲೆ ಕಾಮೆಂಟರಿ ಹುದ್ದೆ ಕಳೆದುಕೊಂಡಿದ್ದರ ಹಿಂದೆ ವಿರಾಟ್ ಕೊಹ್ಲಿ ಕೈವಾಡ?!

ಭಾನುವಾರ, 19 ಫೆಬ್ರವರಿ 2017 (18:18 IST)
ಮುಂಬೈ: ಐಪಿಎಲ್ ನಲ್ಲಿ ಪ್ರಮುಖ ಕಾಮೆಂಟೇಟರ್ ಆಗಿದ್ದ ಹರ್ಷಾ ಭೋಗ್ಲೆ ಇದ್ದಕ್ಕಿದ್ದಂತೆ ಕಳೆದ ವರ್ಷ ವಜಾಗೊಂಡಿದ್ದರು. ಇದಕ್ಕೆ ಕಾರಣ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂಬ ಗುಸು ಗುಸು ಎದ್ದಿದೆ.

 
ವಿರಾಟ್ ಕೊಹ್ಲಿ, ಧೋನಿ ಮತ್ತು ಮುರಳಿ ವಿಜಯ್ ಅವರ ದೂರಿನ ಮೇರೆಗೆ ಭೋಗ್ಲೆಯನ್ನು ಕಾಮೆಂಟರಿ ಟೀಂ ನಿಂದ ಹೊರಗಟ್ಟಲಾಯ್ತು ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ ಮುರಳಿ ವಿಜಯ್ ಭೋಗ್ಲೆ ಸಂದರ್ಶನದ ಸಮಯದಲ್ಲಿ ಕೇಳುವ ಕೆಲವು ಪ್ರಶ್ನೆಗಳು ತೀವ್ರ ಕಿರಿ ಕಿರಿ ಉಂಟುಮಾಡುತ್ತದೆ ಎಂದು ದೂರಿದ್ದರಂತೆ.

ಅದರಲ್ಲೂ ವಿಶೇಷವಾಗಿ ಕಳೆದ ಬಾರಿ ವಿಶ್ವಕಪ್ ಟಿ 20 ಪಂದ್ಯ ನಡೆದಾಗ ಅವರ ಕಾಮೆಂಟರಿಯಲ್ಲಿ ಭಾರತ ವಿರೋಧಿ ಮಾತುಗಳೇ ಅಧಿಕವಾಗಿತ್ತು ಎಂದು ಆಟಗಾರರು ದೂರಿದ್ದರು ಎನ್ನಲಾಗಿದೆ. ಇದೂ ಸಾಲದ್ದಕ್ಕೆ ಕೊಹ್ಲಿ ಶಾಟ್ ಬಗ್ಗೆ ಹರ್ಷಾ ಭೋಗ್ಲೆ ಮಾಡಿದ ಕಾಮೆಂಟ್ ಆಕ್ಷೇಪಾರ್ಹವಾಗಿತ್ತು ಮತ್ತು ಇದನ್ನು ನೇರವಾಗಿ ಕೊಹ್ಲಿ ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಭೋಗ್ಲೆಯನ್ನು ಕಾಮೆಂಟರಿ ಟೀಂನಿಂದ ಹೊರ ಹಾಕಲಾಯಿತು ಎಂಬ ಸುದ್ದಿ ಸದ್ಯ ಚಾಲ್ತಿಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ