ರಾಜ್ಯದಲ್ಲಿ ಲಾಕ್ ಡೌನ್: ಐಪಿಎಲ್ ಕತೆಯೇನು?

ಬುಧವಾರ, 28 ಏಪ್ರಿಲ್ 2021 (10:06 IST)
ಬೆಂಗಳೂರು: ರಾಜ್ಯದಲ್ಲಿ 14 ದಿನಗಳವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಕ್ರೀಡೆ, ಮನರಂಜನೆ ಕ್ಷೇತ್ರಗಳ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಹಾಗಿದ್ದರೆ ಐಪಿಎಲ್ ಕತೆಯೇನು?


ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 12 ರ ಬಳಿಕ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳು ಸ್ಥಳಾಂತರವಾಗಬಹುದೇ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.

ಆದರೆ ಬಿಸಿಸಿಐ ಮೂಲಗಳ ಪ್ರಕಾರ ಐಪಿಎಲ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಕೊರೋನಾ ಭಯವಿರುವ ಆಟಗಾರರು ತಂಡ ತೊರೆಯುವುದಾದರೆ ತೊರೆಯಬಹುದು ಎಂದಿದೆ. ಸದ್ಯಕ್ಕೆ ಐಪಿಎಲ್ ಕ್ರಿಕೆಟಿಗರು ಜೈವಿಕ ಸುರಕ್ಷಾ ವಲಯದಲ್ಲಿದ್ದು, ಪಂದ್ಯಗಳೂ ಖಾಲಿ ಮೈದಾನಗಳಲ್ಲಿ ನಡೆಯುವುದರಿಂದ ಯಾವುದೇ ತೊಂದರೆಯಾಗದು ಎಂದು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ