ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರಿಗೆ ಇಲ್ಲಿದೆ ಒಂದು ಸಿಹಿಸುದ್ದಿ

ಗುರುವಾರ, 11 ಅಕ್ಟೋಬರ್ 2018 (13:28 IST)
ನವದೆಹಲಿ : ಜನರು ತೆರಿಗೆ ಪಾವತಿಯನ್ನು ಸರಿಯಾದ ಸಮಯಕ್ಕೆ ಕಟ್ಟದೆ ಇರುವ ಕಾರಣದಿಂದ ಇದೀಗ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರಿಗೆ ಹೊಸ ಆಫರ್ ವೊಂದನ್ನು ನೀಡಿದೆ.


ಅದೇನೆಂದರೆ ಪ್ರತಿವರ್ಷ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡುತ್ತಾ ಬಂದ ಪ್ರಾಮಾಣಿಕ ತೆರಿಗೆದಾರರಿಗೆ ಕೇಂದ್ರ ಸರ್ಕಾರ ರಾಜ್ಯಪಾಲರ ಜತೆ ಒಂದು ಕಪ್‌ ಟೀ ಕುಡಿಯುವ ಅವಕಾಶ, ಏರ್‌ಪೋರ್ಟ್‌ ಚೆಕ್‌-ಇನ್‌ನಲ್ಲಿ ವಿಶೇಷ ಆದ್ಯತೆ, ಪಾಸ್‌ಪೋರ್ಟ್‌ ಹಾಗೂ  ಮತ್ತು ಕೆಲವು ನಿರ್ದಿಷ್ಟ ಟೋಲ್‌ ಲೇನ್‌ ಇನ್ನಿತರ ಸೌಲಭ್ಯಗಳನ್ನು ಹಾಗೂ ಅವಕಾಶಗಳನ್ನು ನೀಡುವ ನಿರ್ಧಾರ ಮಾಡಿದೆ.


ಜನರು ತೆರಿಗೆಯನ್ನು ನಿಗದಿಪಡಿಸಿದ ಸಮಯದಲ್ಲಿ ಪಾವತಿ ಮಾಡಲಿ ಹಾಗೂ ಪ್ರಾಮಾಣಿಕ ತೆರಿಗೆದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ