ಎಟಿಎಂಗಳಲ್ಲಿ ನೋಟು ಅಭಾವಕ್ಕೆ ಎಸ್ ಬಿಐ ಹೊಸ ಸೂತ್ರ
ಭಾರತದ ಅತೀ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಎಸ್ ಬಿಐ ತನ್ನ ಗ್ರಾಹಕರಿಗೆ ಪಿಒಎಸ್ ಮೆಷಿನ್ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಸೂಚಿಸಿದೆ. ಈ ಮೆಷಿನ್ ಬಳಸಿ ಎಸ್ ಬಿಐ ಅಥವಾ ಬೇರೆ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಇರುವವರೂ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ.
ಈ ನಡುವೆ ಕರ್ನಾಟಕದಲ್ಲಿ ಹಣದ ಅಭಾವ ಎದುರಾಗಿರುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟನೆ ನೀಡಿದೆ. ಅಕ್ರಮ ತಡೆಯಲು ಬೇಕೆಂದೇ ಹಣದ ಅಭಾವ ಸೃಷ್ಟಿಸಿರಬಹುದು ಎಂಬ ಸುದ್ದಿಗಳನ್ನು ಅದು ಅಲ್ಲಗಳೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.