ನಟ ನಾಗ ಚೈತನ್ ರನ್ನು ನೋಡಲು ನದಿಗೆ ಹಾರಿದ ಅಭಿಮಾನಿ

ಶನಿವಾರ, 6 ಮಾರ್ಚ್ 2021 (10:51 IST)
ಹೈದರಾಬಾದ್ : ನಾಗ ಚೈತನ್ಯ ಅವರು ಪ್ರಸ್ತುತ ವಿಕ್ರಮ್ ಕೆ ಕುಮಾರ್ ನಿರ್ದೇಶನದ ‘ಥ್ಯಾಂಕ್ ಯು’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ನಾಗಚೈತನ್ಯ ಅವರು ಪೂರ್ವ ಗೋದಾವರಿ  ನದಿ ತೀರದಲ್ಲಿ ಈ ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ.  ಈ ವಿಚಾರ ತಿಳಿದು ಅವರ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ಆಗಮಿಸಿದ್ದಾರೆ. ಚಿತ್ರೀಕರಣ ನಡೆಯುತ್ತಿರುವಾಗ ನಾಗಚೈತನ್ಯ ಅವರು ನದಿಯಲ್ಲಿ ದೋಣಿ ಓಡಿಸುತ್ತಿದ್ದರು, ಆ ವೇಳೆ ಅವರನ್ನು ಭೇಟಿಯಾಗಲು ಸೇತುವೆ ಮೇಲಿದ್ದ ಯುವಕನೊಬ್ಬ ನದಿಗೆ ಹಾರಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯುವಕ ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಿದ್ದಾನೆ. ಹಾಗೆ ನಾಗಚೈತನ್ಯ ಅವರು ಭವಿಷ್ಯದಲ್ಲಿ ಇಂತಹ ವಿಲಕ್ಷಣ ಕೃತ್ಯಗಳನ್ನು ಮಾಡುವುದರಿಂದ ದೂರವಿರಲು ತಮ್ಮ ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ