ಗೋಪಿಚಂದ್ ಮಾಲಿನೇನಿ ಚಿತ್ರ ತಿರಸ್ಕರಿಸಿದ ನಟಿ ಶ್ರುತಿ ಹಾಸನ್

ಶುಕ್ರವಾರ, 5 ಮಾರ್ಚ್ 2021 (15:18 IST)
ಹೈದರಾಬಾದ್ : ಗೋಪಿ ಚಂದ್ ಮಾಲಿನೇನಿ ಕ್ರ್ಯಾಕ್ ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನದ ಅತಿದೊಡ್ಡ ಹಿಟ್ ಗಳಿಸಿದರು. ಸಂಕ್ರಾಂತಿಯಂದು ಬಿಡುಗಡೆಯಾದ ಚಿತ್ರವು ಯಶಸ್ಸನ್ನು ಕಂಡಿದೆ.

ಇದೀಗ ನಿರ್ದೇಶಕ ಗೋಪಿಚಂದ್ರ ಈಗ ತಮ್ಮ ಮುಂದಿನ ಚಿತ್ರವನ್ನು ನಂದಮೂರಿ ಬಾಲಕೃಷ್ಣ ಅವರೊಂದಿಗೆ ನಿರ್ದೇಶಿಸಲು ಯೋಜಿಸುತ್ತಿದ್ದಾರೆ. ಜನಪ್ರಿಯ ಪ್ರೊಡಕ್ಷನ್ ಹೌಸ್ ಈ ಚಿತ್ರವನ್ನು ನಿರ್ಮಿಸಲಿದೆ. ಸ್ಕ್ರಿಪ್ಟ್ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ನಟಿಸಲು ನಿರ್ದೇಶಕರು ನಟಿ ಶ್ರುತಿ ಹಾಸನ್ ಅವರನ್ನು ಕರೆತರಲು ಯೋಜಿಸಿದ್ದರು. ಆದರೆ ಈ ಪ್ರಸ್ತಾಪವನ್ನು ನಟಿ ಶ್ರುತಿ ಹಾಸನ್ ತಿರಸ್ಕರಿಸಿದ್ದಾರೆ. ಆದರೆ ಅದಕ್ಕೆ ಕಾರಣವೇನೆಂಬುದು ತಿಳಿದಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ