ನಟ ಜಗ್ಗೇಶ್ ಮೇಲೆ ಹಲ್ಲೆ ಆರೋಪ ; ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಶನಿವಾರ, 7 ಏಪ್ರಿಲ್ 2018 (14:40 IST)
ಬೆಂಗಳೂರು : ಬಿಜೆಪಿ ಮುಖಂಡ ನಟ ಜಗ್ಗೇಶ್ ಅವರು ರವಿಕುಮಾರ್ ಎಂಬುವವರ  ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ರವಿಕುಮಾರ್ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಜಗ್ಗೇ ಶ್ ಅವರ ಸಂಬಂಧಿ ಮಾದೇಗೌಡ ಎಂಬುವವರು ಮಲ್ಲೇಶ್ವರಂನಲ್ಲಿ ಪಾನೀಪುರಿ ಗಾಡಿ ಇಟ್ಟುಕೊಂಡಿದ್ದರು. ಆದರೆ ಅಲ್ಲಿಗೆ ಬಂದಿದ್ದ ರವಿಕುಮಾರ್ ಅವರು ರಸ್ತೆ ಬದಿ ಗಾಡಿ ನಿಲ್ಲಿಸಿದ್ದನ್ನು ಪ್ರಶ್ನಿಸಿದಕ್ಕೆ ತಾನು ಜಗ್ಗೇಶ್ ಅವರ ಸಂಬಂಧಿ ಎಂದು ಮಾದೇಗೌಡ ಅವರು ಧಮ್ಕಿ ಹಾಕಿದಲ್ಲದೆ ಕೂಡಲೇ ಜಗ್ಗೇಶ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.


ತಕ್ಷಣ ಸ್ಥಳಕ್ಕಾಗಮಿಸಿದ ಜಗ್ಗೇಶ್ ಅವರು ಗಾಡಿ ಇಲ್ಲಿಯೇ ಇಟ್ಟುಕೊಳ್ತಾನೆ ಏನು ಮಾಡ್ತೀಯಾ ಎಂದು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು  ರವಿಕುಮಾರ್ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಜಗ್ಗೇಶ್ ಅವರು,’ಕಾರ್ಪೋರೇಟರ್ ಮಂಜುನಾಥ್ ಹೆಸರಲ್ಲಿ ಒಬ್ಬ ರೋಲ್ ಕಾಲ್ ಮಾಡ್ತಿದ್ದ. ನನಗೆ ಫೋನ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ರು.ಘಟನಾ ಸ್ಥಳಕ್ಕೆ ಹೋದಾಗ ಆರೋಪಿ ಪರಾರಿಯಾಗಲು ಯತ್ನಿಸಿದ. ಬಳಿಕ ಇಬ್ಬರು ಪೊಲೀಸರು ಸ್ಥಳಕ್ಕೆ ಬಂದ್ರು. ಪೊಲೀಸರ ಸಹಾಯದಿಂದ ಸ್ಟೇಶನ್ ಗೆ ಕರೆದೊಯ್ಯಲಾಯ್ತು. ಮಾತುಕತೆ ಬಳಿಕ ಅವನ ಪಾಡಿಗೆ ಅವನು ಹೋದ ’ ಎಂದು ಹಲ್ಲೆ ಆರೋಪವನ್ನು ಅಲ್ಲಗೆಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ