ನಟ ಸುಶಾಂತ ಕೇಸ್ : ಏಮ್ಸ್, ಸಿಬಿಐ ತನಿಖೆ ನಂಬದಿದ್ದರೆ ಮಾಡೋದೇನು?

ಸೋಮವಾರ, 5 ಅಕ್ಟೋಬರ್ 2020 (16:52 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಈ ನಡುವೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ವಿಧಿವಿಜ್ಞಾನ ವೈದ್ಯಕೀಯ ಮಂಡಳಿಯು ನಟನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಕೊಲೆ ಆಗಿಲ್ಲ ಎಂದು ವರದಿ ನೀಡಿದೆ.

ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಏಮ್ಸ್ ನೀಡಿರುವ ವರದಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

“ಮೊದಲಿನಿಂದಲೂ ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರನ್ನು ಕೆಣಕುವ ಪಿತೂರಿ ನಡೆಯುತ್ತಿದೆ. ಈಗ ಸಿಬಿಐ ವಿಚಾರಣೆಯನ್ನು ಸಹ ನಂಬಲಾಗದಿದ್ದರೆ, ನಾವು ಮೂಕರಾಗಿದ್ದೇವೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಏಮ್ಸ್ ಫೋರೆನ್ಸಿಕ್ ಮೆಡಿಕಲ್ ಬೋರ್ಡ್ ಮುಖ್ಯಸ್ಥರಾಗಿರುವ ಡಾ.ಸುಧೀರ್ ಗುಪ್ತಾ ವರದಿ ನೀಡಿದ್ದಾರೆ. ಅವರಿಗೆ ಯಾವುದೇ ರಾಜಕೀಯ ಸಂಪರ್ಕ ಅಥವಾ ಶಿವಸೇನೆಯೊಂದಿಗೆ ಯಾವುದೇ ಸಂಪರ್ಕವಿಲ್ಲ ”ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ