ನಟ ವಿಶಾಲ್ ಸಂಸ್ಥೆ ಮೇಲೆ ಜಿಎಸ್ ಟಿ ತಂಡ ದಾಳಿ

ಮಂಗಳವಾರ, 24 ಅಕ್ಟೋಬರ್ 2017 (09:12 IST)
ಚೆನ್ನೈ: ತಮಿಳು ಸಿನಿಮಾಗೆ ಜಿಎಸ್ ಟಿ ಉರುಳು ಸಿಕ್ಕಿ ಹಾಕಿಕೊಂಡಿದೆ. ಮರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿರುವ ಬೆನ್ನಲ್ಲೇ ಇನ್ನೊಬ್ಬ ತಮಿಳು ನಟ ವಿಶಾಲ್ ಗೆ ಜಿಎಸ್ ಟಿ ಉರುಳು ಸಿಕ್ಕಿ ಹಾಕಿಕೊಂಡಿದೆ.

 
ವಿಶಾಲ್ ಒಡೆತನದ ಸಿನಿಮಾ ನಿರ್ಮಾಣ ಸಂಸ್ಥೆಯ ಮೇಲೆ ಜಿಎಸ್ ಟಿ ತಂಡದ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ದಾಳಿ ವೇಳೆ ನಿಯಮ ಉಲ್ಲಂಘನೆ ಮಾಡಿರುವ ದಾಖಲೆಗಳು ಸಿಕ್ಕಿವೆಯೇ ಎಂಬುದು ಸ್ಪಷ್ಟವಾಗಿಲ್ಲ.

ವಿಶೇಷವೆಂದರೆ ಮರ್ಸೆಲ್ ಸಿನಿಮಾವನ್ನು ಮೊಬೈಲ್ ನಲ್ಲಿ ನೋಡಿದ್ದ ಬಿಜೆಪಿ ಮುಖಂಡ ಎಚ್. ರಾಜಾ ವಿರುದ್ಧ ವಿಶಾಲ್ ಕಿಡಿ ಕಾರಿದ ಬೆನ್ನಲ್ಲೇ ಅವರ ಸಂಸ್ಥೆ ಮೇಲೆ ದಾಳಿ ನಡೆದಿದೆ. ಇದು ಇನ್ನೆಷ್ಟು ರಾಜಕೀಯ ತಿರುವು ಪಡೆಯುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ