ಉತ್ತರಾಖಂಡದಲ್ಲಿ ಆದ ಅನಾಹುತಕ್ಕೆ ಇದೇ ಕಾರಣವೆಂದ ನಟಿ ದಿಯಾ ಮಿರ್ಜಾ

ಗುರುವಾರ, 11 ಫೆಬ್ರವರಿ 2021 (10:40 IST)
ಹೈದರಾಬಾದ್ : ಉತ್ತರಾಖಂಡದಲ್ಲಿ ಪ್ರವಾಹ ಉಂಟಾಗಿದ್ದು, ಘಟನೆಯಲ್ಲಿ ಅನೇಕ ಸಾವು ನೋವಾಗಿದೆ. ಈ ಬಗ್ಗೆ ಹಲವು ಗಣ್ಯರು, ಸೆಲೆಬ್ರಿಟಿಗಳು ಸಹಾನುಭೂತಿ ವ್ಯಕ್ತಪಡಿಸಿದರೆ , ನಟಿ ದಿಯಾ ಮೀರ್ಜಾ ಅವರು ಮಾತ್ರ ಜನರ ಮೇಲೆ ದೋಷಾರೋಪ ಮಾಡಿದ್ದಾರೆ.

ಮಾನವರು ಮಾಡಿದ ತಪ್ಪುಗಳಿಂದಾಗಿ ಇಂತಹ ಘಟನೆಗಳು ನಡೆಯುತ್ತಿದೆ. ಹಿಮಾಲಯದಲ್ಲಿ ಮರಗಳನ್ನು ಕಡಿಯುವುದು ಮತ್ತು ಬೆಟ್ಟಗಳನ್ನು ತೆರವುಗೊಳಿಸುವುದು ಅನಾದಿ ಕಾಲದಿಂದಲೂ ನಡೆಯುತ್ತಿದೆ. ವಿದ್ಯುತ್ ಯೋಜನೆಗಳನ್ನು ನಿರ್ಮಿಸುವಂತಹ ಅಣೆಕಟ್ಟುಗಳು ಪರಿಸರಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತಿವೆ. ಅದಕ್ಕಾಗಿ ಇಂತಹ ಅಪಾಯಗಳು ನಡೆಯುತ್ತಿದೆ ಎಂದು ನಟಿ ದಿಯಾ ಮಿರ್ಜಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ