ನಟ ಎಂಎಂಎಸ್ ನಾರಾಯಣರವರ ಮೇಲೆ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ ನಟಿ ಪದ್ಮ ಜಯಂತಿ

ಭಾನುವಾರ, 2 ಮೇ 2021 (06:58 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ಚಿತ್ರರಂಗದಲ್ಲಿ ಸಾಮಾನ್ಯವಾಗಿದೆ. ನಟಿ ಶ್ರೀರೆಡ್ಡಿ, ಐಶ್ವರ್ಯ ರಾಜೇಶ್, ಶ್ರುತಿ ಹರಿಹರನ್ ಸೇರಿದಂತೆ ಹಲವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಇದೀಗ ನಟಿ ಪದ್ಮ ಜಯಂತಿ ಅವರು ಹಿರಿಯ ಹಾಸ್ಯ ನಟ ಎಂಎಂಎಸ್ ನಾರಾಯಣ ಅವರ ಮೇಲೆ ಕ್ಯಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಡೆದ ಯುಟ್ಯೂಬ್ ಚಾನೆಲ್ ನಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಹಾಸ್ಯ ನಟ ಎಂಎಂಎಸ್ ನಾರಾಯಣ ಅವರು ಆಲ್ಕೋಹಾಲ್ ಸೇವಿಸಿದ ನಂತರ ಅವರ ಜೊತೆ ಕೆಟ್ಟದಾಗಿ ವರ್ತಿಸಿದ್ದಾರೆ. ನನ್ನನ್ನು ಕೋಣೆಗೆ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ