ಅನಿಲ್ ಕುಟುಂಬದ ಸದಸ್ಯರಿಗೆ ನಟಿ ಪ್ರೇಮಾ ಸಾಂತ್ವನ

ಮಂಗಳವಾರ, 8 ನವೆಂಬರ್ 2016 (13:39 IST)
ದುನಿಯಾ ವಿಜಯ್ ನಾಯಕನಟರಾಗಿ ಅಭಿನಯಿಸುತ್ತಿರುವ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದಲ್ಲಿ ಹೆಲಿಕಾಪ್ಟರ್‌ನಿಂದ ನೀರಿಗೆ ಧುಮುಕಿ ಕಾಣೆಯಾಗಿರುವ ಖಳನಟ ಅನಿಲ್ ಕುಟುಂಬಕ್ಕೆ ನಟಿ ಪ್ರೇಮಾ ಸಾಂತ್ವನ ಹೇಳಿದ್ದಾರೆ.
 
 ಮಾಸ್ತಿಗುಡಿ ಚಿತ್ರದ ಚಿತ್ರಿಕರಣದ ವೇಳೆ ನಗರದ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್‌‌ನಿಂದ ನೀರಿಗೆ ಧುಮುಕುವ ಕ್ಲೈಮ್ಯಾಕ್ಸ್ ಸನ್ನಿವೇಶದ ಶೂಟಿಂಗ್‌ ಸಂದರ್ಭದಲ್ಲಿ ಇಬ್ಬರು ಸಹನಟರು ವಿಧಿವಶರಾದಂತಹ ಘಟನೆ ಸಂಭವಿಸಿತ್ತು
 
ನಟ ವಿಜಯ್ ಮತ್ತು ಸಹನಟರಾದ ಅನಿಲ್ ಮತ್ತು ಉದಯ್ ಶೂಟಿಂಗ್ ವೇಳೆ ಹೆಲಿಕಾಪ್ಟರ್‌ನಿಂದ ನೀರಿಗೆ ಹಾರಿದ್ದಾರೆ. ಅದರಲ್ಲಿ ಉದಯ್ ಮತ್ತು ಅನಿಲ್ ದಡಕ್ಕೆ ಬರುವಲ್ಲಿ ವಿಫಲವಾಗಿದ್ದರು.
 
ಕೆರೆಯಲ್ಲಿ ಅನಿಲ್ ಮತ್ತು ಉದಯ್‌ ಮೃತ ಶೋಧ ಕಾರ್ಯ ನಡೆದಿದ್ದು, ಇಲ್ಲಿಯವರೆಗೆ ಪತ್ತೆಯಾಗಿಲ್ಲ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ