ವೈಷ್ಣವ್ ತೇಜ್ ಗೆ ನಟ ರಾಮ್ ಚರಣ್ ನೀಡಿದ ಸಲಹೆಯೇನು ಗೊತ್ತೇ?

ಶುಕ್ರವಾರ, 5 ಮಾರ್ಚ್ 2021 (09:33 IST)
ಹೈದರಾಬಾದ್ : ಉಪ್ಪೇನಾ ಚಿತ್ರ ನೋಡಿದವರು ಮೆಗಾ ನಟ ವೈಷ್ಣವ್ ತೇಜ್ ಅವರ ಅಭಿನಯವನ್ನು ಶ್ಲಾಘಿಸುತ್ತಿದ್ದಾರೆ.  ಈ ಚಿತ್ರದಲ್ಲಿ ವೈಷ್ಣವ್ ತಜ್ ಅವರ  ಅಭಿನಯದ ಜೊತೆಗೆ ವಿಶೇಷವಾಗಿ ಅವರ  ಕಣ್ಣಿನ ನೋಟದ ಬಗ್ಗೆ ಸಾಕಷ್ಟು ಪ್ರಶಂಸೆಗಳು ಸಿಕ್ಕಿವೆ. ಇದರ  ಹಿಂದೆ ಒಬ್ಬ ಖ್ಯಾತ ನಟನ ಸಲಹೆ ಇದೆ ಎಂದು ನಟ ವೈಷ್ಣವ್ ತೇಜ್ ಹೇಳಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂವಾದದ ವೇಳೆ ಮಾತನಾಡಿದ ವೈಷ್ಣವ್ ತೇಜ್ ಅವರು, ಉಪ್ಪೇನಾ ಚಿತ್ರೀಕರಣ ಪ್ರಾರಂಭಿಸುವ ಮೊದಲು ನಟ ರಾಮ್ ಚರಣ್ ಅವರು ಸಲಹೆ ನೀಡಿದ್ದಾರಂತೆ.

ಹುಬ್ಬುಗಳನ್ನು ತುಂಬಾ ಬಳಕೆ ಮಾಡಬೇಕೆಂದು ಹೇಳಿದ್ದಾರಂತೆ. ಅವರ ಸಲಹೆಯಂತೆ ತಾವು ನಡೆದಿದ್ದು, ಅದರಂತೆ ಇದು ತಮಗೆ ಖ್ಯಾತಿಯನ್ನು ತಂದುಕೊಟ್ಟಿದೆ ಎಂದು  ವೈಷ್ಣವ್ ತೇಜ್ ಸಂತಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ