ಮಗು ಬಂದ ಮೇಲೆ ಗಂಡನನ್ನು ಬೆಡ್ ರೂಂನಿಂದಲೇ ಹೊರಹಾಕಿದ್ದಾರಂತೆ ಅದಿತಿ ಪ್ರಭುದೇವ

Krishnaveni K

ಶುಕ್ರವಾರ, 6 ಸೆಪ್ಟಂಬರ್ 2024 (09:45 IST)
ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟಿ, ಪಕ್ಕಾ ಕನ್ನಡತಿ ಅದಿತಿ ಪ್ರಭುದೇವ ಈಗ ಮುದ್ದು ಮಗಳ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ವೃತ್ತಿ ಜೀವನವನ್ನೂ ಮುಂದುವರಿಸಿದ್ದಾರೆ. ಖ್ಯಾತ ಆರ್ ಜೆ ರಾಪಿಡ್ ರಶ್ಮಿ ಜೊತೆಗಿನ ಸಂದರ್ಶನದಲ್ಲಿ ಅವರು ತಮ್ಮ ಜೀವನದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಸಂದರ್ಶನದಲ್ಲಿ ಮುಖ್ಯವಾಗಿ ಅದಿತಿ ಮಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಮಗಳು ಬಂದ ಮೇಲೆ ತಮ್ಮ ಜೀವನದಲ್ಲಿ ಎಷ್ಟು ಬದಲಾವಣೆಯಾಗಿದೆ ಎಂಬುದನ್ನು ಹೇಳಿದ್ದಾರೆ. ತಮ್ಮ ಮಗಳು ರಾತ್ರಿ ಎದ್ದಿರುತ್ತಾಳೆ, ಹಗಲು ಚೆನ್ನಾಗಿ ನಿದ್ರೆ ಮಾಡುತ್ತಾಳೆ. ಈ ಕಾರಣಕ್ಕೆ ನನಗೆ ರಿಯಾಲಿಟಿ ಶೋನಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.

ಆದರೆ ರಾತ್ರಿ ಅವಳು ಎದ್ದಿರುವ ಕಾರಣ ಅವಳ ಜೊತೆ ನಾನೂ ಎದ್ದಿರುತ್ತೇನೆ. ನನ್ನ ಮಗಳು ಬಂದ ಮೇಲೆ ಗಂಡನನ್ನು ಬೆಡ್ ರೂಂನಿಂದಲೇ ಹೊರಗೆ ಕಳುಹಿಸಿದ್ದೇನೆ. ಬೇರೆ ಯಾವ ಕಾರಣಕ್ಕೂ ಅಲ್ಲ. ಅವರು ಯಾಕೆ ನಿದ್ರೆಗೆಡಬೇಕು ಎಂಬ ಉದ್ದೇಶವಷ್ಟೇ. ಅವರು ನನ್ನ ಜೊತೆ ಎದ್ದಿದ್ದರೂ ಏನೂ ಪ್ರಯೋಜನವಿಲ್ಲ. ಸುಮ್ಮನೇ ಯಾಕೆ ಅವರು ನಿದ್ರೆ ಹಾಳು ಮಾಡಬೇಕು ಎಂದು ಹೊರಗೆ ನಿದ್ರೆ ಮಾಡಲು ಹೇಳಿದ್ದೇನೆ ಎಂದಿದ್ದಾರೆ.

ಇನ್ನು, ಮಗುವಿಗೆ ಎರಡೂವರೆ ತಿಂಗಳಿರುವಾಗಲೇ ಶೂಟಿಂಗ್ ಗೆ ಬಂದಿದ್ದಕ್ಕೆ ಹಲವರು ಯಾಕೆ ಇಷ್ಟು ಬೇಗ ಬಂದ್ರಿ ಎಂದು ಕೇಳಿದ್ದರು. ಆದರೆ ನಾನೇ ನೋಡಿದ್ದೆ, ನಮ್ಮ ಮನೆ ಕಟ್ಟುವಾಗ ಕೆಲಸಕ್ಕೆ ಬರುತ್ತಿದ್ದ ಹೆಣ್ಣು ಮಗಳೊಬ್ಬಳು ಎರಡು-ಎರಡೂವರೆ ತಿಂಗಳ ಮಗುವನ್ನು ಮರಕ್ಕೆ ಜೋಕಾಲಿ ಕಟ್ಟಿ ಮಲಗಿಸಿ ತಾನು ಕಲ್ಲು ಹೊರುವ ಕೆಲಸ ಮಾಡುತ್ತಿದ್ದಳು. ಈ ಥರಾ ಎಷ್ಟೋ ಜನ ಕಷ್ಟಪಡುವವರಿದ್ದಾರೆ. ಅಂತಹವರ ಮಧ್ಯೆ ನನ್ನದೇನೂ ಮಹಾ ಅಲ್ಲ ಎನಿಸಿತು. ಅಷ್ಟಕ್ಕೂ ಈಗ ಹಳೆಯ ಕಾಲದಂತೆ ಮನೆಗೆಲಸವೆಲ್ಲಾ ಕಷ್ಟವಲ್ಲ. ಹಳೆಯ ಕಾಲದಲ್ಲಿ ಕಷ್ಟವಿತ್ತು, ಹೀಗಾಗಿ ವಿಶ್ರಾಂತಿಗೆ ಸೂಚಿಸುತ್ತಿದ್ದರು. ಅದೂ ಅಲ್ಲದೆ, ರಾಜ ರಾಣಿ ಶೋನಲ್ಲಿ ನನಗೆ ಮಗುವನ್ನು ನೋಡಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಹೀಗಾಗಿ ಕಷ್ಟವೆನಿಸುತ್ತಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ