27 ವರ್ಷಗಳ ಬಳಿಕ ಮತ್ತೇ ಒಂದಾದ ಕಂರ್ಪೂರದ ಗೊಂಬೆ ಜೋಡಿ

Sampriya

ಮಂಗಳವಾರ, 27 ಆಗಸ್ಟ್ 2024 (20:02 IST)
Photo Courtesy X
ಬೆಂಗಳೂರು: ಕನ್ನಡದ ನಟ ಶರಣ್ ಅವರು 27 ವರ್ಷಗಳ ಬಳಿಕ ಕರ್ಪೂರದ ಗೊಂಬೆ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದ ಶ್ವೇತಾ ಅವರನ್ನು ಭೇಟಿಯಾಗಿದ್ದಾರೆ. ಶರಣ್ ಅವರ ಮನೆಗೆ ಆಗಮಿಸಿದ ಶ್ವೇತಾ ಅವರು ಕುಟುಂಬದವರ ಜತೆ ಕೆಲಹೊತ್ತು ಮಾತುಕತೆ ನಡೆಸಿ, ಪೋಟೋಗೆ ಫೋಸ್ ನೀಡಿದ್ದಾರೆ.

ಈ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶರಣ್ ಅವರು ಶೇರ್ ಮಾಡಿ ತಮ್ಮಿಬ್ಬರ 27ವರ್ಷಗಳ ಸ್ನೇಹದ ಬಗ್ಗೆ  ಬರೆದುಕೊಂಡಿದ್ದಾರೆ.

'ಕರ್ಪೂರದ ಗೊಂಬೆ' ಇಂದ ಶುರುವಾದ ಸ್ನೇಹ, ಪರಸ್ಪರ ಗೌರವ 27 ವರ್ಷಗಳ ನಂತರವೂ ಹಾಗೆಯೇ ಉಳಿದಿದೆ. ನನ್ನ ಮೊದಲ ಸಿನಿಮಾ, ಹೊಸಬನಾಗಿದ್ದರು, ಹಳೆಯ ಸ್ನೇಹತನೇನೋ ಎಂಬಷ್ಟು ಕಾಳಜಿ ತೋರುತ್ತಿದ್ದ ಸಮಯ. ಶ್ವೇತಾರಂತೆ ಆಗ ಎಲ್ಲರೂ ನನ್ನ ಬೆನ್ನ ಹಿಂದೆ ನಿಂತು ಧೈರ್ಯತುಂಬಿರದಿದ್ದರೆ ನಿಮ್ಮ ಶರಣ ಇಂದಿನ ಶರಣ ಆಗುತ್ತಿರಲಿಲ್ಲವೇನೋ ಅನಿಸುತ್ತದೆ . ಹಳೆಯ ಸ್ನೇಹಿತರ ಜೊತೆ ಇಡೀ ಕುಟುಂಬ ಕಳೆಯುವ ಸಮಯ ಎಷ್ಟು ಸಂತೋಷ ನೀಡುತ್ತದೆಯಲ್ಲವೇ.
From our first film to 27 years later, some friendships never fade ಎಂದು ಬರೆದುಕೊಂಡಿದ್ದಾರೆ.

ಕಾಮಿಡಿಯನ್‌ ಆಗಿ ಕರ್ಪೂರದಗೊಂಬೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶರಣ್‌ಗೆ ಆ ಸಿನಿಮಾದಲ್ಲಿ ನಟಿ ಶ್ವೇತಾ ಅವರು ಜೋಡಿಯಾಗಿ ನಟಿಸಿದ್ದರು. ಅಂದು ಈ ಸಿನಿಮಾ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಸದ್ದು ಮಾಡಿತು. ಆ ನಂತರ ಶರಣ್ ಅವರು ಅನೇಕ ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ಬಣ್ಣ ಹಚ್ಚಿದರು.

ಶ್ವೇತಾ ಅವರು ಮದುವೆಯಾದ ನಂತೆರ  ಹಲವು ವರ್ಷಗಳ ಬಳಿಕ ಮತ್ತೇ ನಟನೆಗೆ ಮರಳಿದ್ದಾರೆ. ಇದೀಗ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀನಿವಾಸ ಸೀರಿಯಲ್‌ನಲ್ಲಿ ಲಕ್ಷ್ಮೀ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ