ಪವನ್ ಕಲ್ಯಾಣ ಬಳಿಕ ಮತ್ತೊಬ್ಬ ಸ್ಟಾರ್ ನಟನ ಬಗ್ಗೆ ಸಿನಿಮಾ ಮಾಡಲು ಹೊರಟ ಆರ್ ಜಿವಿ

ಸೋಮವಾರ, 3 ಆಗಸ್ಟ್ 2020 (11:57 IST)
ಹೈದರಾಬಾದ್ : ಪವನ್ ಕಲ್ಯಾಣ ಬಗ್ಗೆ ಚಿತ್ರ ಮಾಡಿ ವಿವಾದಕ್ಕೀಡಾದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಬ್ಬ ಸ್ಟಾರ್ ನಟನ  ಬಗ್ಗೆ ಚಿತ್ರ ಮಾಡಲು ಹೊರಟಿದ್ದಾರೆ.
 

ಹೌದು. ಪವನ್ ಕಲ್ಯಾಣ ಜೀವನದ ಕುರಿತು ಪವರ್ ಸ್ಟಾರ್ ಸಿನಿಮಾ ಮಾಡಿ ಅವರ ಅಭಿಮಾನಿಗಳ ಕೆಂಗೆಣ್ಣಿಗೆ  ಗುರಿಯಾದ ಆರ್ ಜಿವಿ ಇದೀಗ ಹೊಸ ವೆಬ್ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಸಿನಿಮಾಗೆ ‘ಅಲ್ಲು’ ಎಂಬ ಹೆಸರಿಟ್ಟಿದ್ದು, ಈ ಚಿತ್ರವು ಎ ಅರವಿಂದ ಎಂಬ ಮುಖ್ಯ ಪಾತ್ರದ ಮೂಲಕ ನಡೆಯಲಿದೆ. ಹಾಗೇ ಬಹುದೊಡ್ಡ ಸ್ಟಾರ್ ನ ಕುಟುಂಬಕ್ಕೆ ಭಾಮೈದನೊಬ್ಬ ಏನು ಮಾಡುತ್ತಾನೆ,  ಆತ ಜನ ರಾಜ್ಯಂ ಪಕ್ಷ ಘೋಷಣೆ ಮಾಡಿದ ಬಳಿಕ ಶುರುವಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಈ ಮಾಹಿತಿ ಪ್ರಕಾರ ಈ ಸಿನಿಮಾ ನಟ ಅಲ್ಲು ಅರ್ಜುನ್ ತಂದೆ ನಿರ್ಮಾಪಕ ಅಲ್ಲು ಅರವಿಂದ್ ಕುರಿತಾಗಿದೆ ಎನ್ನಲಾಗಿದೆ ಅಲ್ಲದೇ  ನಟ ಚಿರಂಜೀವಿ ‘ಪ್ರಜಾ ರಾಜ್ಯಂ’ ಪಕ್ಷ ಸ್ಥಾಪಿಸಿದ ಕಾರಣ ಇದು ನಟ ಅಲ್ಲು ಅರ್ಜುನ್ ಕುಟುಂಬಕ್ಕೆ ಸಂಬಂಧಪಟ್ಟಿದ್ದು ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ