ನಟಿ ಶ್ರೀಸುಧಾ ಮತ್ತು ಛಾಯಾಗ್ರಾಹಕ ಶ್ಯಾಮ ಕೆ.ನಾಯ್ಡು ಪ್ರೇಮ ವಂಚನೆ ಪ್ರಕರಣಕ್ಕೆ ಹೊಸ ತಿರುವು

ಸೋಮವಾರ, 3 ಆಗಸ್ಟ್ 2020 (11:54 IST)
ಹೈದರಾಬಾದ್ : ತೆಲುಗು ನಟಿ ಶ್ರೀಸುಧಾ ಮತ್ತು ಛಾಯಾಗ್ರಾಹಕ ಶ್ಯಾಮ ಕೆ.ನಾಯ್ಡು  ಅವರ  ಪ್ರೇಮ ವಂಚನೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಛಾಯಾಗ್ರಾಹಕ ಶ್ಯಾಮ ಕೆ.ನಾಯ್ಡು  ಅವರು ಮದುವೆಯಾಗಿ  ಭರವಸೆ ನೀಡಿ ತನ್ನೊಂದಿಗೆ ಸಂಬಂಧ ಇಟ್ಟುಕೊಂಡು ಈಗ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ  ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಈ ಹಿನ್ನಲೆಯಲ್ಲಿ ಶ್ಯಾಮ ಕೆ.ನಾಯ್ಡು  ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಹೊರಗೆ ಬಿಡಲಾಗಿದೆ.

ಆದರೆ ಇದೀಗ ಛಾಯಾಗ್ರಾಹಕ ಶ್ಯಾಮ ಕೆ.ನಾಯ್ಡು ಅವರನ್ನು ಬಚಾವ್ ಮಾಡಲು ಎಸ್ ಆರ್ ನಗರದ ಸರ್ಕಲ್ ಇನ್ ಸ್ಪೆಕ್ಟರ್ ಮುರಳಿ ಕೃಷ್ಣ 5 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ನಟಿ ಶ್ರೀಸುಧಾ ಆರೋಪಿಸಿದ್ದಾರೆ. ಈ ಬಗ್ಗೆ ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ತಿಳಿಸಿದ್ದಾರೆ. ಅಲ್ಲದೇ ಅವರಿಗೆ ಜಾಮೀನಿ ಕೊಡಿಸಲು ತನ್ನ ಸಹಿಯನ್ನು ನಕಲು ಮಾಡಿ ಹೈಕೋರ್ಟ್ ಗೆ ರಾಜಿ ಒಪ್ಪಂದ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ