ಲವ್ ಯೂ ರಚ್ಚು ನಿರ್ಮಾಪಕರು ಅವಮಾನ ಮಾಡಿದ್ದಾರೆ: ಅಜೇಯ್ ರಾವ್ ಆರೋಪ

ಮಂಗಳವಾರ, 21 ಡಿಸೆಂಬರ್ 2021 (16:58 IST)
ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಟ್ರೈಲರ್ ಲಾಂಚ್ ವೇಳೆ ಗೈರು ಹಾಜರಾಗಿದ್ದ ನಾಯಕ ನಟ ಅಜೇಯ್ ರಾವ್ ಈಗ ಇದರ ಹಿಂದಿನ ನಿಜ ಕಾರಣವನ್ನು ಬಯಲು ಮಾಡಿದ್ದಾರೆ.

ಲವ್ ಯೂ ರಚ್ಚು ಸಿನಿಮಾ ಟ್ರೈಲರ್ ಲಾಂಚ್ ವೇಳೆ ನಾಯಕಿ ರಚಿತಾ ರಾಂ ಮಾತ್ರ ಉಪಸ್ಥಿತರಿದ್ದರು. ಇದರ ಬಗ್ಗೆ ನಿರ್ಮಾಪಕರನ್ನು ಪ್ರಶ್ನಿಸಿದ್ದಾಗ ಅವರಿಗೆ ಆರೋಗ್ಯ ಸರಿಯಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಆದರೆ ಇದರ ಬೆನ್ನಲ್ಲೇ ನಿರ್ಮಾಪಕ ಗುರುದೇಶ್ ಪಾಂಡೆ ಮತ್ತು ಅಜೇಯ್ ರಾವ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿಬಂದಿತ್ತು.

ಇದರ ಬಗ್ಗೆ ಖಾಸಗಿ ಮಾಧ‍್ಯಮಕ್ಕೆ ಪ್ರತಿಕ್ರಿಯಿಸಿರುವ ಅಜೇಯ್ ರಾವ್ ‘ಮನಸ್ತಾಪ ಖಂಡಿತಾ ಇದೆ. ಆದರೆ ಅದು ವೈಯಕ್ತಿಕವಾಗಿರಲಿ. ಆ ಮನಸ್ತಾಪದಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ಅವಮಾನ ಆಗಿದೆ. ಹೀಗಾಗಿ ಅವರ ಜೊತೆ ಕೂತು ಸಿನಿಮಾ ಪ್ರಚಾರ ಮಾಡಕ್ಕೆ ಇಷ್ಟಪಡಲ್ಲ. ವೈಯಕ್ತಿಕವಾಗಿ ಪ್ರಚಾರ ಮಾಡ್ತೀನಿ. ಆದರೆ ಯಾಕೆ ಅವಮಾನ ಆಯಿತು ಎನ್ನುವುದನ್ನು ಯಾವತ್ತಿಗೂ ಬಹಿರಂಗಪಡಿಸಲ್ಲ. ಆದರೆ ಲವ್ ಯೂ ರಚ್ಚು ಸಿನಿಮಾ ಮೇಲೆ ನನಗೆ ಪ್ರೀತಿಯಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ