ಇಂದಿನಿಂದ ಅಜೇಯ್ ರಾವ್ ಕೃಷ್ಣ ಟಾಕೀಸ್ ಓಪನ್

ಶುಕ್ರವಾರ, 16 ಏಪ್ರಿಲ್ 2021 (08:44 IST)
ಬೆಂಗಳೂರು: ನಟ ಅಜೇಯ್ ರಾವ್ ಅಭಿನಯಿಸಿರುವ ಸಿನಿಮಾವೊಂದು ಬಹಳ ದಿನಗಳ ನಂತರ ಇಂದು ತೆರೆಗೆ ಬರುತ್ತಿದೆ. ಇಂದಿನಿಂದ ಕೃಷ್ಣ ಟಾಕೀಸ್ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.


ಕೃಷ್ಣ ಸೀರೀಸ್ ಅಜೇಯ್ ರಾವ್ ಪಾಲಿಗೆ ಅದೃಷ್ಟದ ಟೈಟಲ್. ಇದುವರೆಗೆ ಈ ಟೈಟಲ್ ನಲ್ಲಿ ನಟಿಸಿರುವ ಅವರ ಸಿನಿಮಾಗಳು ಯಶಸ್ವಿಯಾಗಿವೆ. ಹೀಗಾಗಿ ಈ ಸಿನಿಮಾದ ಮೇಲೂ ಅವರಿಗೆ ನಿರೀಕ್ಷೆಯಿದೆ.

ಈಗಾಗಲೇ ಸಿನಿಮಾದ ಕೆಲವು ಹಾಡುಗಳು ಉತ್ತಮ ರೆಸ್ಪಾನ್ಸ್ ಪಡೆದಿದೆ. ಜೊತೆಗೆ ಚಿತ್ರತಂಡವೂ ವಿಶಿಷ್ಟವಾಗಿ ಪ್ರಚಾರ ಮಾಡುವ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸಿದೆ. ಸಿನಿಮಾ ಕೂಡಾ ಅದೇ ರೀತಿ ಯಶಸ್ವಿಯಾಗಬಹುದೆಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ