ವಿಚಾರಣೆಗೆ ಹಾಜರಾಗದ ಆಂಕರ್ ಅನುಶ್ರೀ ಮೇಲೆ ಸಿಸಿಬಿ ಗರಂ

ಶನಿವಾರ, 26 ಸೆಪ್ಟಂಬರ್ 2020 (09:04 IST)
ಮಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಆಂಕರ್ ಅನುಶ್ರೀ ನಿನ್ನೆ ಮಂಗಳೂರು ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು.


ಆದರೆ ಅನುಶ್ರೀ ನಿನ್ನೆ ವಿಚಾರಣೆಗೆ ಹಾಜರಾಗಿರಲಿಲ್ಲ. ಮಂಗಳೂರಿಗೆ ಹೊರಟಿದ್ದ ಅನುಶ್ರೀ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದರು. ಆದರೆ ಸಿಸಿಬಿ ಕಚೇರಿಗೆ ಬಂದಿರಲಿಲ್ಲ. ಹೀಗಾಗಿ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ. ಇಂದು ಕಡ್ಡಾಯವಾಗಿ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಅನುಶ್ರೀಗೆ ವಾರ್ನಿಂಗ್ ಕೊಡಲಾಗಿದೆ. ಹೀಗಾಗಿ ಇಂದು ಅನು ವಿಚಾರಣೆಗೆ ಹಾಜರಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ