ಪ್ರಾಣಿ ದತ್ತು ಪಡೆದ ಸ್ಯಾಂಡಲ್ ವುಡ್ ತಾರೆಯರು

ಸೋಮವಾರ, 4 ಜನವರಿ 2021 (09:10 IST)
ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರನ್ನು ತಮ್ಮ ಆರಾಧ‍್ಯ ದೈವವೆಂಬಂತೆ ಪೂಜಿಸುವ, ಅವರು ಮಾಡುವ ಕೆಲಸಗಳನ್ನು ಅನುಕರಿಸುವ ಎಷ್ಟೋ ಅಭಿಮಾನಿಗಳು ನಮ್ಮಲ್ಲಿದ್ದಾರೆ. ಅಂತಹವರ ಅಭಿಮಾನಕ್ಕೆ ತಕ್ಕಂತೆ ನಡೆದುಕೊಂಡು ಇತರರಿಗೆ ಮಾದರಿಯಾಗುವ ತಾರೆಯರೂ ಇದ್ದಾರೆ.


ಮೊನ್ನೆಯಷ್ಟೇ ನಟ ವಸಿಷ್ಠ ಸಿಂಹ ಬನ್ನೇರುಘಟ್ಟ ಉದ್ಯಾನವನದಲ್ಲಿ ಮರಿ ಸಿಂಹವೊಂದನ್ನು ದತ್ತು ಪಡೆದು ಸುದ್ದಿಯಾಗಿದ್ದರು. ಪ್ರಾಣಿಗಳನ್ನು ದತ್ತು ಸ್ವೀಕರಿಸುವುದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲರಿಗಿಂತ ಮುಂದಿದ್ದಾರೆ. ಪ್ರಾಣಿಪ್ರಿಯರಾಗಿರುವ ದರ್ಶನ್ ಮೈಸೂರಿನ ಮೃಗಾಲಯದಲ್ಲಿರುವ ಹುಲಿ, ಜಿಂಕೆ, ಆನೆ ಸೇರಿದಂತೆ ಹಲವು ಪ್ರಾಣಿಗಳನ್ನು ದತ್ತು ಪಡೆದು ಅವುಗಳ ವೆಚ್ಚ ನೋಡಿಕೊಳ್ಳುತ್ತಿದ್ದಾರೆ.

ಇವರಲ್ಲದೆ, ಇತ್ತೀಚೆಗೆ ನಟ ಶಿವರಾಜಕುಮಾರ್ ಕೂಡಾ ಮೈಸೂರು ಮೃಗಾಲಯದ ಆನೆ ದತ್ತು ಪಡೆದು ತಮ್ಮ ಅಭಿಮಾನಿಗಳೂ ಪ್ರಾಣಿಗಳನ್ನು ದತ್ತು ಸ್ವೀಕರಿಸಲು ಪ್ರೇರಣೆಯಾಗಿದ್ದರು. ಅಷ್ಟೇ ಏಕೆ ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನಲ್ಲಿ ಪ್ರವರ್ಧ ಮಾನಕ್ಕೆ ಬರುತ್ತಿರುವ ಯುವ ನಟ ಧನ್ವೀರ್ ಗೌಡ ಕೂಡಾ ಪ್ರಾಣಿ ದತ್ತು ಪಡೆದು ಸುದ್ದಿಯಾಗಿದ್ದಾರೆ. ತಾರೆಯರ ಇಂತಹ ಕೆಲಸಗಳಿಂದ ಪ್ರೇರಣೆ ಪಡೆದು ಎಷ್ಟೋ ಅಭಿಮಾನಿಗಳೂ ಅವರ ಹಾದಿಯಲ್ಲಿ ಸಾಗುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ