ರಾಜಕೀಯಕ್ಕೆ ಬರ್ತಾರಾ ಸಾಹಸಸಿಂಹ ವಿಷ್ಣು ಅಳಿಯ, ನಟ ಅನಿರುದ್ಧ್?

ಶನಿವಾರ, 16 ಜನವರಿ 2021 (10:28 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಇತ್ತೀಚೆಗೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಮುಂದೊಂದು ದಿನ ರಾಜಕೀಯಕ್ಕೆ ಬರುವ ಉದ್ದೇಶವಿಟ್ಟುಕೊಂಡಿದ್ದಾರಾ?


ಬಿಬಿಎಂಪಿ ಕಮಿಷನರ್ ಭೇಟಿಯಾದ ನಟ ಅನಿರುದ್ಧ‍್ ಸ್ವಚ್ಛತೆ ಮತ್ತು ಕೆರೆಗಳ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪತ್ರಕರ್ತರು ಈಗ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ನಿಮಗೆ ಮುಂದೊಂದು ದಿನ ರಾಜಕೀಯಕ್ಕೆ ಬರುವ ಇಚ್ಛೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು ‘ಒಳ್ಳೆ ಕೆಲಸ ಮಾಡಲು ರಾಜಕೀಯವೇ ಆಗಬೇಕೆಂದಿಲ್ಲ. ನನಗೆ ರಾಜಕೀಯಕ್ಕೆ ಬರುವ ಉದ್ದೇಶವೂ ಇಲ್ಲ. ನಮ್ಮ ನಗರ ಸ್ವಚ್ಛವಾಗಬೇಕು, ದೇಶ ಸುಂದರವಾಗಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ