ನನಗೆ ಕೆಲಸ ಸಿಕ್ಕೇ ಸಿಗುತ್ತೆ, ನನಗೆ ಇನ್ ಸೆಕ್ಯುರಿಟಿ ಇಲ್ಲ: ಅನಿರುದ್ಧ್ ತಿರುಗೇಟು

ಭಾನುವಾರ, 21 ಆಗಸ್ಟ್ 2022 (20:27 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯಿಂದ ಹೊರ ಬಂದ ಮೇಲೆ ನಿರ್ಮಾಪಕರು ತಮ್ಮ ಮೇಲೆ ಮಾಡಿರುವ ಆರೋಪಗಳಿಗೆ ನಟ ಅನಿರುದ್ಧ್ ತಿರುಗೇಟು ನೀಡಿದ್ದಾರೆ.

ಜೀ ಕನ್ನಡ ವಾಹಿನಿಯ ಸುಧೀಂದ್ರ ಭಾರಧ್ವಾಜ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ, ಅನಿರುದ್ಧ್ ಅವರಿಗೆ ಇನ್ ಸೆಕ್ಯುರಿಟಿ ಇದೆ ಎಂದು ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಅನಿರುದ್ಧ್, ನನಗೆ ಯಾಕೆ ಇನ್ ಸೆಕ್ಯುರಿಟಿ ಇರಬೇಕು? ನನಗೆ ಇಷ್ಟು ವರ್ಷ ಕೆಲಸ ಸಿಕ್ಕಿದ ಮೇಲೆ ಎಂದರೆ ಇನ್ನೂ ಸಿಗುತ್ತದೆ. ದೇವರು, ಅಭಿಮಾನಿಗಳು, ಕುಟುಂಬದವರು ನನ್ನ ಜೊತೆ ಇದ್ದಾರೆ. ಎಂದ ಮೇಲೆ ನನಗೆ ಯಾಕೆ ಭಯ? ನಾನು ಕೇವಲ ನಟನಾಗಿ ಮಾತ್ರವಲ್ಲ, ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಹೀಗಾಗಿ ನನಗೆ ಕೆಲಸ ಇಲ್ಲದೆ ಆಗಲ್ಲ. ಆ ನಂಬಿಕೆ ನನಗಿದೆ’ ಎಂದಿದ್ದಾರೆ.

ಇದಲ್ಲದೆ, ಜೊತೆ ಜೊತೆಯಲಿ ಧಾರವಾಹಿ ತಂಡ ನಿನ್ನೆ ಮಾಡಿದ್ದ ಪ್ರತೀ ಆರೋಪಗಳಿಗೂ ಅನಿರುದ್ಧ್ ಇಂದು ಪ್ರತ್ಯುತ್ತರ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ