ದೇಶದ ಬಾವುಟ ಕಿತ್ತು ಹಾಕಿದವರಿಗೆ ಶಿಕ್ಷೆಯಾಗಬೇಕು: ನಟ ಅನಿರುದ್ಧ್

ಗುರುವಾರ, 28 ಜನವರಿ 2021 (11:01 IST)
ಬೆಂಗಳೂರು: ದೆಹಲಿಯಲ್ಲಿ ಮೊನ್ನೆ ನಡೆದ ರೈತರ ಪ್ರತಿಭಟನೆಯಲ್ಲಿ ಅತಿರೇಕದ ವರ್ತನೆ ತೋರಿದ ಕಿಡಿಗೇಡಿಗಳ ವಿರುದ್ಧ ನಟ ಅನಿರುದ್ಧ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


‘ನಮ್ಮ ದೇಶಕ್ಕೋಸ್ಕರ ಅಸಂಖ್ಯಾತ ಜನ ಬಲಿದಾನ ನೀಡಿದ್ದಾರೆ. ಅದರ ಮಹತ್ವ ಅರಿಯದೇ ನಮ್ಮ ದೇಶದ ಬಾವುಟವನ್ನು ತೆಗೆದು ಬಿಸ್ ಹಾಕಿರೋ ವ್ಯಕ್ತಿ ಮತ್ತು ಗಣರಾಜ್ಯೋತ್ಸವದ ದಿನ, ಕತ್ತಿಯಿಂದ ನಮ್ಮ ಪೊಲೀಸರಿನವರ ಮೇಲೆ ಹಲ್ಲೆ ಮಾಡಿರೋರು ಮಹಾಪರಾಧಿಗಳು. ನಮ್ಮ ದೇಶಕ್ಕೆ ಮತ್ತು ನಮ್ಮ ರೈತರ ಹೋರಾಟಕ್ಕೆ ಅವಮಾನ ಮಾಡಿರೋರಗೆ ಕಠಿಣ ಶಿಕ್ಷೆ ಆಗಲೇಬೇಕು’ ನಟ ಅನಿರುದ್ಧ್ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ