ಬೊಂಬೆ ಹೇಳುತೈತೆ ಹಾಡಿನ ವೇಳೆ ಅರ್ಧದಲ್ಲೇ ವೇದಿಕೆಯಿಂದ ಹೊರನಡೆದ ಅಶ್ವಿನಿ

ಶನಿವಾರ, 22 ಅಕ್ಟೋಬರ್ 2022 (08:30 IST)
Photo Courtesy: Twitter
ಬೆಂಗಳೂರು: ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಹಲವು ಭಾವುಕ ಕ್ಷಣಗಳಿಗೆ ಕಾರಣವಾಯಿತು. ಅದರಲ್ಲೂ ಪುನೀತ್ ಬಗ್ಗೆ ಹೇಳುವಾಗ ಅಶ್ವಿನಿ ಭಾವುಕರಾಗುತ್ತಿದ್ದರು.

ಇನ್ನು, ವಿಜಯ್ ಪ್ರಕಾಶ್ ವೇದಿಕೆ ಮೇಲೆ ಬೊಂಬೆ ಹೇಳುತೈತೆ ಹಾಡನ್ನು ಹಾಡಿದರು. ಕೊನೆಯಲ್ಲಿ ಶಿವಣ್ಣ ನೇತೃತ್ವದಲ್ಲಿ ಇಡೀ ಡಾ.ರಾಜ್ ಕುಟುಂಬ ವೇದಿಕೆಗೆ ಬಂದು ಹಾಡಿಗೆ ಧ್ವನಿಗೂಡಿಸಿತು.

ವೇದಿಕೆಗೆ ಬರುವಾಗಲೇ ಭಾವುಕರಾಗಿ ಬಂದ ಅಶ್ವಿನಿ ಆ ಹಾಡನ್ನು ಹಾಡುತ್ತಿದ್ದಂತೇ ಬಿಕ್ಕಿ ಬಿಕ್ಕಿ ಅತ್ತರು. ಕೊನೆಗೆ ಅಳು ತಡೆಯಲಾಗದೇ ಮಧ್ಯದಿಂದಲೇ ಎದ್ದು ವೇದಿಕೆಯಿಂದ ತೆರಳಿದರು.  ಈ ಕ್ಷಣ ಎಲ್ಲರ ಕಣ್ಣಂಚು ಒದ್ದೆ ಮಾಡಿತು.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ