ನಿರ್ಮಾಪಕ ಸಾರಾ ಗೋವಿಂದ್ ಪುತ್ರ ಅನೂಪ್ ವಿರುದ್ಧ ದೂರು: ಕಾರಣವೇನು ಗೊತ್ತಾ?

ಮಂಗಳವಾರ, 20 ನವೆಂಬರ್ 2018 (11:31 IST)
ಬೆಂಗಳೂರು: ನಿರ್ಮಾಪಕ ಸಾರಾ ಗೋವಿಂದ್ ಪುತ್ರ, ನಟ ಅನೂಪ್ ತಮ್ಮ ವಿರುದ್ಧ ಹಲ್ಲೆ ಮಾಡಿದ್ದಾರೆಂದು ಕಾರು ಚಾಲಕ ಹರೀಶ್ ದೂರು ನೀಡಿದ್ದಾರೆ.

ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಚಾಲಕ ಹರೀಶ್, ಅನೂಪ್ ಮತ್ತು ಸ್ನೇಹಿತರು ತಮ್ಮ ಮೇಲೆ ಥಳಿಸಿ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಾ ಗೋವಿಂದ್ ಹರೀಶ್ ಗೆ ಅನೂಪ್ ಸಾಕಷ್ಟು ಧನ ಸಹಾಯ ಮಾಡಿದ್ದ. ಆತನಿಗೆ ಕೊಡಿಸಿದ್ದ ಕಾರು ವಾಪಸ್ ಕೇಳಲು ಹೋದಾಗ ವಾಗ್ವಾದ ನಡೆದಿರಬಹುದಷ್ಟೇ. ಆದರೆ ಅನೂಪ್ ಹಲ್ಲೆ ನಡೆಸಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ