ತಮಿಳುನಾಡಿನಲ್ಲಿ ಬಾಹುಬಲಿ ಸಿನಿಮಾ ಶೋ ರದ್ದು

ಶುಕ್ರವಾರ, 28 ಏಪ್ರಿಲ್ 2017 (09:48 IST)
ಚೆನ್ನೈ: ಬಾಹುಬಲಿ 2 ಸಿನಿಮಾ ಇಂದು ಬಿಡುಗಡೆಯಾಗಿದೆ. ಆದರೆ ತಮಿಳುನಾಡಿನಲ್ಲಿ ಇಂದು ಬೆಳಿಗ್ಗೆ ಸಿನಿಮಾ ನೋಡಲು ಹೋದ ಪ್ರೇಕ್ಷಕನಿಗೆ ನಿರಾಸೆ ಕಾದಿತ್ತು.

 
ಯಾಕೆಂದರೆ ಈ ಹಿಂದೆ ನಿಗದಿಯಾಗಿದ್ದ ಬೆಳಗಿನ ಶೋ ರದ್ದಾಗಿದೆ. ಅದಕ್ಕೆ ಕಾರಣ ನಿರ್ಮಾಪಕರು ಮತ್ತು ವಿತರಕರ ನಡುವಿನ ತಿಕ್ಕಾಟ. ಇಬ್ಬರ ನಡುವೆ ಹಣದ ವಿಚಾರವಾಗಿ ಸೆಟ್ಲ್ ಮೆಂಟ್ ಆಗದ ಕಾರಣ ಬೆಳಗಿನ ಶೋ ರದ್ದುಗೊಳಿಸಲಾಗಿದೆ.

11 ಗಂಟೆ ನಂತರದ ಶೋಗಳು ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ನಸುಕಿನ ಜಾವದಿಂದಲೇ ಚೆನ್ನೈನ ಥಿಯೇಟರ್ ಮುಂದೆ ಕಾದು ಕುಳಿತಿದ್ದ ಪ್ರೇಕ್ಷಕರಿಗೆ ನಿಜಕ್ಕೂ ಇದೊಂದು ಶಾಕಿಂಗ್ ನ್ಯೂಸ್ ಆಗಿತ್ತು. ಅಲ್ಲದ್ದ ನೂರಾರು ಜನ ತಮ್ಮ ನಿರಾಸೆ ಹೊರಹಾಕಿದರು.

ಆದರೆ ಶೋ ರದ್ದಾದ ಬಗ್ಗೆ ಮೊದಲೇ ಬುಕಿಂಗ್ ಮಾಡಿದವರಿಗೆ ನೋಟೀಸ್ ನೀಡದೇ ಇದ್ದುದರಿಂದ ಗೊಂದಲದ ವಾತಾವರಣ ಉಂಟಾಯಿತು. ಹೀಗಾಗಿ ಬೆಳಗಿನ ಅವಧಿಗೆ ಬುಕಿಂಗ್ ಮಾಡಿದ ಪ್ರೇಕ್ಷಕರರನ್ನು ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ