ಬಿಗ್ ಬಾಸ್ ಕನ್ನಡ ಸ್ಪರ್ಧಿ ತನಿಷಾ ವಿರುದ್ಧ ದೂರು ದಾಖಲು

ಮಂಗಳವಾರ, 14 ನವೆಂಬರ್ 2023 (17:00 IST)
Photo Courtesy: Twitter
ಬೆಂಗಳೂರು: ಯಾಕೋ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ವರ್ತೂರು ಸಂತೋಷ್ ಹುಲಿ ಉಗುರು ಪ್ರಕರಣದಲ್ಲಿ ಬಂಧಿತರಾಗಿ ಈಗ ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇದೀಗ ಮತ್ತೊಬ್ಬ ಸ್ಪರ್ಧಿಸ ತನಿಷಾ ವಿರುದ್ಧ ದೂರು ದಾಖಲಾಗಿದೆ.

ತನಿಷಾ ಕುಪ್ಪಂಡ ಮಾತಿನ ಭರದಲ್ಲಿ ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಅವರ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರ್ತೂರು ಸಂತೋಷ್ ಅವರ ಬಗ್ಗೆ ತನಿಷಾ ನೀನು ವಡ್ಡ ಅಲ್ಲ, ಆದರೆ ವಡ್ಡನ ರೀತಿ ಆಕ್ಟ್ ಮಾಡುತ್ತಿದ್ದೀಯಾ ಎಂದಿದ್ದರು. ಅವರ ಈ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ವಡ್ಡ ಪದ ಭೋವಿ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಆಕೆಯ ವಿರುದ್ಧ ಭೋವಿ ಸಮುದಾಯ ಪ್ರತಿಭಟನೆ ಮಾಡಲಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ