ಧ್ರುವ ಸರ್ಜಾಗೂ ಮೊದಲೇ ಥಿಯೇಟರ್ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದ ದರ್ಶನ್

ಗುರುವಾರ, 4 ಫೆಬ್ರವರಿ 2021 (09:54 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಥಿಯೇಟರ್ ನಲ್ಲಿ ವೀಕ್ಷಕರಿಗೆ ಶೇ. 100 ರಷ್ಟು ಅವಕಾಶ ಯಾಕಿಲ್ಲ ಎಂದು ಆರಂಭಿಸಿದ ಅಭಿಯಾನ ಸಂಚಲನ ಮೂಡಿಸಿತ್ತು. ಆದರೆ ಧ‍್ರುವಗಿಂತ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವಿಚಾರವನ್ನು ಪ್ರಸ್ತಾಪಿಸಿದ್ದರು.


ದರ್ಶನ್, ಕಳೆದ ತಿಂಗಳು ಫೇಸ್ ಬುಕ್ ಲೈವ್ ನಲ್ಲಿ ಥಿಯೇಟರ್ ಸಂಪೂರ್ಣ ತೆರೆಯದೇ ಇರುವುದರ ಹಿಂದೆ ಅಂಬಾನಿಯವರ 5 ಜಿ ಲಾಬಿ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ ಇದೀಗ ಕೇಂದ್ರವೇ ಒಪ್ಪಿಗೆ ನೀಡಿದರೂ ರಾಜ್ಯ ಸರ್ಕಾರ ಕೊರೋನಾ ನೆಪದಲ್ಲಿ ಇನ್ನೂ ಥಿಯೇಟರ್ ಸಂಪೂರ್ಣವಾಗಿ ತೆರೆಯಲು ಅವಕಾಶ ಮಾಡಿಕೊಡದೇ ಇರುವುದರು ಸಿನಿಮಾ ಮಂದಿಯ ಕೆಂಗಣ್ಣಿಗೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ