ಅರ್ಜುನನ ಸಾವಿಗೆ ಮರುಗಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮಂಗಳವಾರ, 5 ಡಿಸೆಂಬರ್ 2023 (08:30 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತು. ಇದೀಗ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ, ಗಜಪಡೆಯ ಕ್ಯಾಪ್ಟನ್ ಅರ್ಜುನ್ ಸಾವಿಗೆ ಅವರು ಮರುಗಿದ್ದಾರೆ.

ಕಾಡಾನೆಗಳನ್ನು ನಿಯಂತ್ರಿಸುವಾಗ ನಡೆದ ಕಾಳಗದಲ್ಲಿ ಎಲ್ಲರ ಪ್ರೀತಿಯ ಆನೆ ಅರ್ಜುನ್ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದ. ಆತನ ಸಾವಿಗೆ ಇಡೀ ಕರುನಾಡೇ ಮರುಗಿದೆ.

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಅರ್ಜುನ್ ಜೊತೆಗಿರುವ ಫೋಟೋವೊಂದನ್ನು ಪ್ರಕಟಿಸಿ ಸಂತಾಪ ಸೂಚಿಸಿದ್ದಾರೆ. ಎಂಟು ಬಾರಿ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 64 ವರ್ಷದ ಅರ್ಜುನ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾಧದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ. ಓಂ ಶಾಂತಿ ಎಂದು ದರ್ಶನ್ ಸಂದೇಶ ಬರೆದಿದ್ದಾರೆ.

ಅರ್ಜುನ 2012 ರಿಂದ 2019 ರ ನಡುವೆ ಎಂಟು ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತಿದ್ದ. ಈ ವರ್ಷವೂ ದಸರಾ ಉತ್ಸವದಲ್ಲಿ ಭಾಗಿಯಾಗಿದ್ದ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ