ಮಧ್ಯರಾತ್ರಿ ಜಗ್ಗೇಶ್ ಗೆ ಕರೆ ಮಾಡಿದ್ದ ಚಿರಂಜೀವಿ ಸರ್ಜಾ
ಒಂದು ದಿನ ಮಧ್ಯರಾತ್ರಿ 11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಎಂದೆ. ಮಾಮ ನಾನು ಚಿರು ಅಂದ. ವಿಷಯ ನಾನು ಮೇಘನ ಮದುವೆ ಆಗಬೇಕು. ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ-ಅಮ್ಮನ ಜತೆ ಮಾತನಾಡಬೇಕು ಅಂದ. ನಾನು ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತನಾಡಿ ನನ್ನ ಸ್ನೇಹಿತ ಜ್ಯೋತಿಷಿಗಳ ಬಳಿ ಇಬ್ಬರ ಜಾತಕ ನೋಡಿಸಿದೆ. ಅಷ್ಟಮದಲ್ಲಿ ಕುಜದೋಷವಿದೆ. ಪೂಜೆ ಮಾಡಿದರೆ ಸರಿ ಹೋಗುತ್ತದೆ ಎಂದರು. ಆ ಪೂಜೆ ಮಾಡಿಸಿದರೋ ಇಲ್ಲವೋ ಗೊತ್ತಿಲ್ಲ.