ದರ್ಶನ್ ಗೆ ಬೆನ್ನು ನೋವಿದೆ, ಈ ಕಾರಣಕ್ಕೆ ಅವರಿಗೆ ಹಾಸಿಗೆ, ದಿಂಬು ನೀಡಬೇಕು ಎಂದು ಅವರ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ಈ ವೇಳೆ ಜೈಲಿನಲ್ಲಿ ದರ್ಶನ್ ಅವಸ್ಥೆಯ ಬಗ್ಗೆಯೂ ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಊಟವನ್ನು ದೂರದಿಂದಲೇ ಎಸೆಯುತ್ತಾರೆ. ಶೂ ಕಾಲಿನಲ್ಲೇ ರೂಂ ಒಳಗೆ ಬರ್ತಾರೆ. ಸುಪ್ರೀಂಕೋರ್ಟ್ ನಲ್ಲಿ ಬೇಲ್ ರದ್ದಾಗಿದ್ದಕ್ಕೆ ಅಮಾನವೀಯವಾಗಿ ನಡೆದುಕೊಳ್ತಿದ್ದಾರೆ. ಸಿಗರೇಟು ಕೇಳಿದ್ರೂ ಕೊಡ್ತಿಲ್ಲ. ಜೈಲಿನ ಮ್ಯಾನ್ಯುವೆಲ್ ನಲ್ಲಿ ಸಿಗರೇಟು ಕೊಡಬಾರದು ಎಂದಿಲ್ಲ. ಆದರೂ ಕೊಡ್ತಿಲ್ಲ. ಜೈಲಿನ ನಿಯಮದ ಪ್ರಕಾರವೂ ಕೊಡಬೇಕಾದ ವಸ್ತುಗಳನ್ನು ಕೊಡಲ್ಲ. ಎಲ್ಲದಕ್ಕೂ ಕೋರ್ಟ್ ಆದೇಶ ಕೊಡಬೇಕು ಅಂತಾರೆ. ಎಲ್ಲವನ್ನೂ ಪುಟಗಟ್ಟಲೆ ಕೋರ್ಟ್ ನಿಂದ ಬರೆಸಿಕೊಂಡು ಹೋಗಕ್ಕೆ ಆಗುತ್ತಾ ಎಂದು ಆಕ್ರೋಶ ಹೊರಹಾಕಿದ್ದಾರೆ.