ಕಿಚ್ಚ ಸುದೀಪ್ ಭೇಟಿ ಉದ್ದೇಶ ಬಹಿರಂಗಪಡಿಸಿದ ಸಿಎಂ ಬೊಮ್ಮಾಯಿ

ಬುಧವಾರ, 1 ಸೆಪ್ಟಂಬರ್ 2021 (09:12 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.
Photo Courtesy: Twitter


ಇದೀಗ ಸ್ವತಃ ಸಿಎಂ ಬೊಮ್ಮಾಯಿ ಸ್ಯಾಂಡಲ್ ವುಡ್ ಸ್ಟಾರ್ ನಟ ತಮ್ಮನ್ನು ಭೇಟಿಯಾದ ಉದ್ದೇಶವೇನೆಂದು ಬಹಿರಂಗಪಡಿಸಿದ್ದಾರೆ.

‘ನಮ್ಮ ಕನ್ನಡ ಚಿತ್ರರಂಗದ ಪ್ರೀತಿಯ ನಟ ಕಿಚ್ಚ ಸುದೀಪ್ ಭೇಟಿಯಾಗಿದ್ದು ಖುಷಿಕೊಟ್ಟಿದೆ. ಚಿತ್ರರಂಗದ ಹಲವು ಸಮಸ್ಯೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ನಿಮ್ಮ ಭವಿಷ್ಯಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ಸಿಎಂ ಹಾರೈಸಿದ್ದಾರೆ. ಇನ್ನು, ಸುದೀಪ್ ಕೂಡಾ ಸಿಎಂ ಮಾತಿಗೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ