ಕಿಚ್ಚ ಸುದೀಪ್-ನಿರ್ಮಾಪಕರ ಜಗಳಕ್ಕೆ ಬ್ರೇಕ್ ಹಾಕಲು ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ

ಮಂಗಳವಾರ, 18 ಜುಲೈ 2023 (16:17 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್ ಕುಮಾರ್ ನಡುವೆ ಮೂಡಿಬರುವ ಮನಸ್ತಾಪ ಸರಿಪಡಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಯಾಗಿದ್ದಾರೆ.

 ಈ ಹಿಂದೊಮ್ಮೆ ನಿರ್ಮಾಪಕ ಎಂ.ಎನ್. ಕುಮಾರ್ ಹಣ ನೀಡಿದ್ದ ವಿಚಾರ ರವಿಚಂದ್ರನ್ ಗೂ ಗೊತ್ತಿದೆ ಎಂದಿದ್ದರು. ಇದೀಗ ರದ್ದಾಂತ ದೊಡ್ಡದಾಗಿ ಸುದೀಪ್ ನ್ಯಾಯಾಲಯದ ಮೆಟ್ಟಿಲೇರಿದ್ದರೆ ಕುಮಾರ್ ವಾಣಿಜ್ಯ ಮಂಡಳಿ ಎದುರು ನ್ಯಾಯ ಕೊಡಿಸಲು ಧರಣಿ ಕೂತಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್, ‘ನಾನು ಅವರು ಇವರು ಹೇಳುವುದನ್ನು ಕೇಳಿಕೊಂಡು ಮಾತನಾಡಲ್ಲ. ದಾಖಲೆ ನೋಡಬೇಕು. ಇಬ್ಬರ ಜೊತೆಗೂ ಮಾತನಾಡ್ತೀನಿ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅದನ್ನು ಹಾಗೇ ಬಿಡಲ್ಲ. ಕುಮಾರ್ ನನಗೆ ಫೋನ್ ಮಾಡಿದ್ದರು. ಆದರೆ ಶೂಟಿಂಗ್ ನಲ್ಲಿದ್ದ ಕಾರಣ ಪಿಕ್ ಮಾಡಲಾಗಲಿಲ್ಲ. ಸುದೀಪ್ ಜೊತೆ ಮಾತನಾಡಬೇಕಾ ಎಂದು ಯೋಚನೆ ಮಾಡ್ತೀನಿ. ಸುದೀಪ್ ಗೆ ನೋವಾಗಿದೆ. ಅದಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾನೆ. ಇದು ಒಂಥರಾ ಗಂಡ ಹೆಂಡ್ತಿ ಜಗಳ ಬೀದಿಗೆ ಬಂದಿದೆ ಅಷ್ಟೇ’ ಎಂದಿದ್ದಾರೆ. ಹೀಗಾಗಿ ಈಗ ಸುದೀಪ್ ಮತ್ತು ನಿರ್ಮಾಪಕರ ನಡುವಿನ ವೈಮನಸ್ಯವನ್ನು ರವಿಚಂದ್ರನ್ ಬಗೆಹರಿಸುತ್ತಾರಾ ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ