ಕಾಮಿಡಿ ಕಿಲಾಡಿಗಳಿಗೆ ಸರ್ಪ್ರೈಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ಶನಿವಾರ, 4 ಜನವರಿ 2020 (09:04 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಅಪರೂಪ. ಹಾಗಿದ್ದರೂ ಡಿ ಬಾಸ್ ರನ್ನು ಟಿವಿ ಪರದೆ ಮೇಲೆ ನೋಡಬೇಕು ಎಂಬ ಎಷ್ಟೋ ಅಭಿಮಾನಿಗಳ ಆಸೆ ಮಾತ್ರ ಹಾಗೆಯೇ ಇದೆ.


ಇದಕ್ಕೂ ಮೊದಲು ದರ್ಶನ್ ಕಿರುತೆರೆಯ ಶೋ ಒಂದಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯಿತ್ತಾದರೂ ಸಿನಿಮಾ ಶೂಟಿಂಗ್ ಗೇ ನನಗೆ ಸಮಯ ಸಾಲುತ್ತಿಲ್ಲ. ಇನ್ನು ಕಿರುತೆರೆಗೆ ಹೇಗೆ ಬರಲಿ ಎಂದು ಈ ಎಲ್ಲಾ ಸುದ್ದಿಗಳನ್ನು ತಳ್ಳಿ ಹಾಕಿದ್ದರು ದರ್ಶನ್.

ಆದರೆ ಇದೀಗ ದರ್ಶನ್ ಕಾಮಿಡಿ ಕಿಲಾಡಿಗಳು ಸೆಟ್ ಗೆ ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಅದೂ ಕರೆಯದೇ ಬಂದಿದ್ದಾರೆ ಎನ್ನುವುದು ವಿಶೇಷ. ಹಲವು ದಿನಗಳಿಂದ ದರ್ಶನ್ ರನ್ನು ವೇದಿಕೆಗೆ ಕರೆಸಬೇಕೆಂದುಕೊಂಡರೂ ಆಗಿರಲಿಲ್ಲವಂತೆ. ಆದರೆ ಈಗ ದರ್ಶನ್ ತಾವಾಗಿಯೇ ಪ್ರೀತಿಯಿಂದ ಸೆಟ್ ಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಕುರುಕ್ಷೇತ್ರ ಜೀ ಕನ್ನಡದಲ್ಲಿ ಪ್ರಸಾರವಾಗಿ ದಾಖಲೆಯ 19.2 ಟಿವಿಆರ್ ಅಂಕಗಳನ್ನು ಪಡೆದುಕೊಂಡಿದ್ದಕ್ಕೆ ಕೇಕ್ ಕಟ್ ಮಾಡಿ ಸಂಭ್ರಮಿಸಲಾಯಿತು. ಈ ಕ್ಷಣಗಳನ್ನು ನವರಸನಾಯಕ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ