ಬೆನ್ನು ನೋವು, ಕೈ ನೋವು, ಜೈಲಲ್ಲಿ ಇರಕ್ಕಾಗ್ತಿಲ್ಲ ಜಾಮೀನು ಕೊಡಿ: ದರ್ಶನ್ ಅವಸ್ಥೆ ಬಿಚ್ಚಿಟ್ಟ ಲಾಯರ್

Krishnaveni K

ಸೋಮವಾರ, 14 ಅಕ್ಟೋಬರ್ 2024 (15:43 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಬಿಡುಗಡೆಯಾಗಿ ಅವರ ಪರ ವಕೀಲರು ನಾನಾ ಕಸರತ್ತು ನಡೆಸಿದ್ದಾರೆ. ದರ್ಶನ್ ಆರೋಗ್ಯ ಸಮಸ್ಯೆಯನ್ನೇ ಮುಂದಿಟ್ಟು ವಕೀಲರು ಜಾಮೀನಿಗೆ ಮನವಿ ಮಾಡಿದ್ದಾರೆ.

ನಟ ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಬೆನ್ನು ಊತವಾಗಿದೆ. ಕೂರಕ್ಕೆ ಆಗ್ತಿಲ್ಲ, ನಿಲ್ಲಕ್ಕೂ ಆಗ್ತಿಲ್ಲ. ಇತ್ತೀಚೆಗೆ ಕೈಗೆ ಶಸ್ತ್ರಚಿಕಿತ್ಸೆಯಾಗಿದೆ. ಜೈಲು ವಾಸದಿಂದ ಕೈ ನೋವಾಗುತ್ತಿದೆ. ಈ ಹಿಂದೆ ಶೂಟಿಂಗ್ ಸಮಯದಲ್ಲಿ ಹಲವು ಗಾಯಗಳಾಗಿವೆ. ಅದೆಲ್ಲಾ ಈಗ ಸಮಸ್ಯೆಯಾಗುತ್ತಿದೆ ಎಂದು ದರ್ಶನ್ ಪರ ವಕೀಲರು ಕೋರ್ಟ್ ಮುಂದೆ ಅಲವತ್ತುಗೈದಿದ್ದಾರೆ.

ದರ್ಶನ್ ವಿರುದ್ಧ ಹಲವು ಸಾಕ್ಷ್ಯಗಳಿರುವ ಕಾರಣಕ್ಕೆ ಅವರಿಗೆ ಬಿಡುಗಡೆ ಕಷ್ಟ ಎನ್ನಲಾಗಿತ್ತು. ಆದರೆ ಇದೇ ಕಾರಣಕ್ಕೆ ದರ್ಶನ್ ಆರೋಗ್ಯ ಸಮಸ್ಯೆಯ ನೆಪ ಮುಂದಿಟ್ಟಿದ್ದಾರೆ. ಬೆನ್ನಿಗೆ ಶಸ್ತ್ರಚಿಕಿತ್ಸೆ ನೆಪದಲ್ಲಿ ಒಂದೋ ಜಾಮೀನು ಇಲ್ಲಾ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡುತ್ತಿದ್ದಾರೆ.

ಆದರೆ ಸಾಕ್ಷ್ಯಗಳು ದರ್ಶನ್ ವಿರುದ್ಧವಾಗಿರುವ ಕಾರಣಕ್ಕೆ ಸದ್ಯಕ್ಕೆ ಅವರಿಗೆ ಆರೋಗ್ಯ ಸಮಸ್ಯೆಯೇ ಪ್ಲಸ್ ಪಾಯಿಂಟ್ ಆಗುವ ನಿರೀಕ್ಷೆಯಿದೆ. ಈ ಕಾರಣಕ್ಕೇ ಅವರು ಬಳ್ಳಾರಿಯಲ್ಲೇ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ