ಅರ್ಜುನ್ ಸರ್ಜಾ ಮೇಲಿನ ಶೃತಿ ಆರೋಪದ ಕುರಿತು ‘ವಿಸ್ಮಯ’ ಚಿತ್ರದ ನಿರ್ದೇಶಕ ಹೇಳಿದ್ದೇನು ಗೊತ್ತೇ…?

ಭಾನುವಾರ, 21 ಅಕ್ಟೋಬರ್ 2018 (07:05 IST)
ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿದ ಮೀಟೂ ಅಭಿಯಾನದಲ್ಲಿ ಕೆಲವೊಂದು ಪ್ರಮುಖ ವ್ಯಕ್ತಿ ಹಾಗೂ ನಟರ ಮುಖವಾಡ ಕಳಚುತ್ತಿದೆ. ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ನಟ ಅರ್ಜುನ್  ಸರ್ಜಾನಿಂದ ಮೀಟೂ ಅನುಭವ ಆಗಿದೆ ಎಂದು ಹೇಳಿದ್ದಾರೆ ಈ ಕುರಿತು ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿದ್ದು ಹೀಗೆ…


'ಶೃತಿ ಹರಿಹರನ್ ಮೀಟೂ ಅಭಿಯಾನದಲ್ಲಿ ಅರ್ಜುನ್ ಸರ್ ಮೇಲೆ ಆರೋಪ ಹೊರಿಸಿದ್ದು ಕೇಳಿ ನನಗೆ ಶಾಕ್ ಆಯ್ತು ಶೃತಿ ಹರಿಹರನ್ ಇಬ್ಬರೂ ನನಗೆ ಒಳ್ಳೆಯ ಸ್ನೇಹಿತರು. ಹಾಗೇ ಅವರಿಬ್ಬರ ಕುಟುಂಬ ನನಗೆ ಪರಿಚಿತ.ಇನ್ನು ಅರ್ಜುನ್ ಸರ್ಜಾ ಕುರಿತು ಹೇಳುವುದಾದರೆ ಅವರೊಬ್ಬರು ಜಂಟಲ್ ಮೆನ್ ಹಾಗೂ ನಟನೆಯಲ್ಲೂ ಸೈ ಅನಿಸಿಕೊಂಡರು. ಇದು ಶೃತಿ ಹರಿಹರನ್ ಗೂ ಅನ್ವಯಿಸುತ್ತದೆ. ವಿಸ್ಮಯ ಸಿನಿಮಾದ ಆ ಪ್ರಣಯ ದೃಶ್ಯಗಳ ಬಗ್ಗೆ ನಾವೇ ಮೊದಲೇ ಚರ್ಚಿಸಿದ್ದೇವೆ. ಇದರಲ್ಲಿ ಕೆಲವೊಂದಿಷ್ಟನ್ನು ಬದಲಾಯಿಸಿದ್ದೇವೆ. ಈ  ಶೂಟ್ ಆಗಿದ್ದು 2 ವರ್ಷದ ಹಿಂದೆ. ಇದರ ಕುರಿತಾಗಿ ಕೆಲವೊಂದು ನನಗೆ ನೆನಪಿಲ್ಲ' ಎಂದಿದ್ದಾರೆ ಅರುಣ್.


ಈ ಸಿನಿಮಾದ ಕೆಲವೊಂದು ಪ್ರಣಯ ದೃಶ್ಯಗಳನ್ನು ಅರ್ಜುನ್ ಸರ್ ಕಟ್ ಮಾಡುವುದಕ್ಕೆ ಹೇಳಿದ್ದರು.ನನಗೆ ಇಬ್ಬರೂ ಹೆಣ್ಣುಮಕ್ಕಳಿದ್ದಾರೆ ಹಾಗಾಗಿ ಪ್ರಣಯದ ಕೆಲವೊಂದು ದೃಶ್ಯಗಳು ಬೇಡ ಅದರಲ್ಲಿ ನಟಿಸುವುದಕ್ಕೆ ಮುಜುರವಾಗುತ್ತದೆ ಎಂದು ಕೂಡ ಹೇಳಿದ್ದರು. ವೈಯಕ್ತಿಕವಾಗಿ ಶೃತಿ ಹಾಗೂ ಅರ್ಜುನ್ ನನಗೆ ಒಳ್ಳೆಯ ಸ್ನೇಹಿತರು. ಒಂದು ಒಳ್ಳೆಯ ಉದ್ದೇಶದಿಂದ ತಂಡವಾಗಿ ನಾವೆಲ್ಲರೂ ಸಿನಿಮಾ ಮಾಡಿದ್ದೇವೆ. ಹಾಗೇ ಸೆಟ್ ನಲ್ಲಿ ಬಹಳ ತಮಾಷೆಯಾಗಿ ಇದ್ದಿದ್ದೇವು ಎಂದು ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿದ್ದಾರೆ.


ಮೀಟೂ ಚಳುವಳಿಯು ಎಲ್ಲಾ ಮಹಿಳೆಯರಿಗೆ ಒಂದೊಳ್ಳೆ ಸುರಕ್ಷಿತ ವಾತಾವರಣವನ್ನು ತರಲಿ ಎಂದು ಬಯಸುತ್ತೇನೆ ಎಂದು ವೈದ್ಯನಾಥನ್ ಹೇಳಿದ್ದಾರೆ.

ಹಾಗೇ ಈ ವಿಷಯಕ್ಕೆ ಸಂಬಂಧಿಸಿದಂತೆ ದಯವಿಟ್ಟು ನನಗೆ ಕರೆಯಾಗಲಿ ಮೆಸೇಜ್ ಆಗಲಿ ಮಾಡಬೇಡಿ. ಇದರ ಕುರಿತು ನನಗೆ ಮತ್ತೇನು ಹೇಳುವುದಕ್ಕೆ ಇಲ್ಲ ಎಂದಿದ್ದಾರೆ. ಅರುಣ್ ವೈದ್ಯನಾಥನ್ ಪೋಸ್ಟ್ ಗೆ ಒಂದಷ್ಟು ಪರ ವಿರೋಧ ಕಮೆಂಟ್ ಗಳು ಕೂಡ ಬಂದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ