ನಾಯಿಗಳ ಮಾರಣಹೋಮ ಖಂಡಿಸಿದ ದಿಗಂತ್-ಐಂದ್ರಿತಾ ದಂಪತಿ

ಶನಿವಾರ, 11 ಸೆಪ್ಟಂಬರ್ 2021 (17:14 IST)
ಬೆಂಗಳೂರು: ಶಿವಮೊಗ್ಗದಲ್ಲಿ 150 ಬೀದಿ ನಾಯಿಗಳ ಮಾರಣಹೋಮ ಮಾಡಿದ ಘಟನೆ ಬಗ್ಗೆ ಪ್ರಾಣಿಪ್ರಿಯರಾದ ನಟ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಶಿವಮೊಗ್ಗದ ಗ್ರಾಮವೊಂದರಲ್ಲಿ 150 ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಜೀವಂತ ಸಮಾಧಿ ಮಾಡಲಾಗಿತ್ತು. ಈ ಘಟನೆ ಭಾರೀ ಸುದ್ದಿಯಾಗಿತ್ತು. ಇದರ ಬಗ್ಗೆ ಪ್ರತಿಕ್ರಿಯಿಸಿರುವ ದಿಗಂತ್-ಐಂದ್ರಿತಾ ನಿಜಕ್ಕೂ ಇದು ಹೇಯ ಕೃತ್ಯ. ಆ ಬೀದಿ ನಾಯಿಗಳ ಪರಿಸ್ಥಿತಿ ಹೇಗಿದ್ದಿರಬಹುದು ಎಂದು ಊಹಿಸಲೂ ಅಸಾಧ‍್ಯ. ಅಂಥಾ ಕ್ರೂರ ಕೃತ್ಯವಿದು. ಮಾನವೀಯತೆ ಸತ್ತು ಹೋಗಿದೆ ಎಂದು ದಂಪತಿ ಖೇದ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ