ನಟ ಅಲ್ಲು ಅರ್ಜುನ್ ನೋಡಲು ಈ ಅಭಿಮಾನಿ ಮಾಡಿದ್ದೇನು ಗೊತ್ತಾ?

ಬುಧವಾರ, 23 ಸೆಪ್ಟಂಬರ್ 2020 (16:17 IST)
ಹೈದರಾಬಾದ್ : ತಮ್ಮ ನೆಚ್ಚಿನ ನಟ ಅಲ್ಲುಅರ್ಜುನ್ ಅವರನ್ನು ನೋಡಲು ಅವರ ಅಭಿಮಾನಿಯೊಬ್ಬರು ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡಿದ್ದಾರೆ.

ಪಿ.ನಾಗೇಶ್ವರ್ ರಾವ್ ಎನ್ನುವ ವ್ಯಕ್ತಿಯೊಬ್ಬರು ನಟ ಅಲ್ಲು ಅರ್ಜುನ್ ಅವರ ಅಭಿಮಾನಿಯಾಗಿದ್ದು, ಅವರು ಅಲ್ಲು ಅರ್ಜುನ್ ಅವರನ್ನು ನೋಡಲು ಮಾಚೆರ್ಲಾದಿಂದ ಹೈದರಾಬಾದ್ ಗೆ ತೆರಳಿದ್ದಾರೆ. ಈತ ಈಗ 250 ಕಿಲೋಮೀಟರ್ ನಡೆದು ಬಂಜಾರ ಬೆಟ್ಟ ತಲುಪಿದ್ದಾರೆ ಎನ್ನಲಾಗಿದೆ.
 

ಈ ಬಗ್ಗೆ ಮಾತನಾಡಿದ ಆತ, ಗಂಗೋತ್ರಿ ಸಿನಿಮಾ ನೋಡಿ ನಾನು ಅಲ್ಲು ಅರ್ಜುನ್ ಅವರ ಅಭಿಮಾನಿಯಾಗಿದ್ದೇನೆ. ಹಲವಾರು ಬಾರಿ ಪ್ರಯತ್ನಿಸಿದರೂ ನನಗೆ ಅವರನ್ನು ಭೇಟಿಯಾಗಲು ಆಗಲಿಲ್ಲ. ಈ ಬಾರಿ ಸೆಪ್ಟಂಬರ್ 17 ರಂದು ನಾನು ಅವರನ್ನು ನೋಡಲು ಪಾದಯಾತ್ರೆ ಮಾಡಿದ್ದಾನೆ. ಇದೀಗ ನಾನು ಹೈದರಾಬಾದ್ ತಲುಪಿದ್ದು ಅವರ ಭೇಟಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ