ನಟ ದುನಿಯಾ ವಿಜಯ್ ಅವರು ಎರಡು ಆಟೋ ರಿಕ್ಷಾಗಳನ್ನು ಅಂಗವಿಕಲ ಮತ್ತು ಅನಾಥರೊಬ್ಬರಿಗೆ ಉಚಿತವಾಗಿ ಕೊಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರ ’ಕನಕ’ ಚಿತ್ರದಲ್ಲಿ ಅವರು ಆಟೋ ಚಾಲಕರಾಗಿ ಅಭಿನಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಆಟೋಗಳನ್ನು ಉಚಿತವಾಗಿ ಕೊಟ್ಟಿದ್ದಾರೆ.
ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಕನಕ. ಈ ಚಿತ್ರಕ್ಕೆ "ಡಾ.ರಾಜ್ಕುಮಾರ್ ಅಭಿಮಾನಿ' ಎಂಬ ಟ್ಯಾಗ್ಲೈನ್ ಕೂಡಾ ಇದೆ. ಸದ್ಯ ಕಥೆಯಲ್ಲಿ ಬಿಝಿಯಾಗಿರುವ ಚಂದ್ರು, "ಇದೊಂದು ಪಕ್ಕಾ ಎಂಟರ್ಟೈನರ್ ಸಿನಿಮಾವಾಗಿರಲಿದೆ' ಎಂದಷ್ಟೇ ಹೇಳುತ್ತಾರೆ. ಚಿತ್ರದಲ್ಲಿ ಆಟೋ ಕೂಡಾ ಪ್ರಮುಖವಾಗಿದ್ದು, ಪ್ರೇಕ್ಷಕರಿಗೆ ಖುಷಿಕೊಡುವ ಸಾಕಷ್ಟು ಅಂಶಗಳು ಕಥೆಯಲ್ಲಿವೆ ಎನ್ನುತ್ತಾರೆ.