ಚಿರಂಜೀವಿ ಸರ್ಜಾ ಸಾವಿನ ದುಃಖದಿಂದ ಹೊರಬಾರದ ಕುಟುಂಬ ಮಾಡುತ್ತಿರುವುದು ಏನು ಗೊತ್ತಾ?

ಗುರುವಾರ, 2 ಜುಲೈ 2020 (09:33 IST)
ಬೆಂಗಳೂರು: ಇತ್ತೀಚೆಗಷ್ಟೇ ಅಕಾಲಿಕವಾಗಿ ನಿಧನರಾದ ನಟ ಚಿರಂಜೀವಿ ಸರ್ಜಾ ಸಾವಿನ ನೋವಿನಿಂದ ಇನ್ನೂ ಅವರ ಕುಟುಂಬ ವರ್ಗ ಹೊರಬಂದಿಲ್ಲ.


ಗರ್ಭಿಣಿಯಾಗಿರುವ ಚಿರು ಪತ್ನಿ ಮೇಘನಾ ರಾಜ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಸರ್ಜಾ ಎಂದು ಬರೆದುಕೊಂಡು ಸುದ್ದಿಯಾಗಿದ್ದರು.

ಇದೀಗ ಸಹೋದರ ಧ್ರುವ ಸರ್ಜಾ ಕೂಡಾ ಪ್ರತಿನಿತ್ಯ ಅಣ್ಣನ ನೆನಪಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಪ್ರಕಟಿಸುತ್ತಾ ಅಣ್ಣನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಳ್ಳುತ್ತಿದ್ದಾರೆ. ಅದರ ಜತೆಗೆ ಧ್ರುವ ಪತ್ನಿ ಪ್ರೇರಣಾ ಶಂಕರ್ ಕೂಡಾ ಭಾವನ ನೆನಪು ಮಾಡಿಕೊಂಡಿದ್ದು, ಹಳೆಯ ವಿಡಿಯೋ ಒಂದನ್ನು ಪ್ರಕಟಿಸಿ ಬೇಸರ ಹೊರಹಾಕಿದ್ದಾರೆ. ಅಂತೂ ಚಿರು ತೀರಿಕೊಂಡು ತಿಂಗಳಾಗುತ್ತಾ ಬಂದರೂ ಅವರ ಕುಟುಂಬಸ್ಥರು ಮಾತ್ರ ಇನ್ನೂ ಆಘಾತದಿಂದ ಹೊರಬಂದಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ