ಸಂಚಾರಿ ವಿಜಯ್ ಮರೆತ ಫಿಲಂ ಚೇಂಬರ್

ಶುಕ್ರವಾರ, 18 ಜೂನ್ 2021 (08:58 IST)
ಬೆಂಗಳೂರು: ವಾಣಿಜ್ಯ ಮಂಡಳಿಯಲ್ಲಿ ಇತ್ತೀಚೆಗೆ ಮಡಿದ ಕನ್ನಡ ಸಿನಿಮಾ ಕ್ಷೇತ್ರದ ಗಣ್ಯರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಆದರೆ ಇಲ್ಲಿ ಮೊನ್ನೆಯಷ್ಟೇ ನಿಧನರಾದ ಸಂಚಾರಿ ವಿಜಯ್ ಗೆ ಗೌರವ ಸಲ್ಲಿಸಲು ವಾಣಿಜ್ಯ ಮಂಡಳಿ ಮರೆತಂತಿದೆ. ನಿರ್ಮಾಪಕ ರಾಮು, ಕೆಸಿಎನ್ ಚಂದ್ರಶೇಖರ್, ಅಣ್ಣಯ್ಯ ಸಿನಿಮಾ ನಿರ್ಮಾಪಕ ಚಂದ್ರು ಫೋಟೋಗಳನ್ನು ಇರಿಸಿ ಹೂವಿನ ಹಾರ ಹಾಕಿ ಗೌರವ ಸಮರ್ಪಿಸಲಾಗಿದೆ.

ಆದರೆ ಈ ಸಾಲಿನಲ್ಲಿ ಮೊನ್ನೆಯಷ್ಟೇ ನಿಧನರಾದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಫೋಟೋವೇ ಇರಲಿಲ್ಲ. ವಾಣಿಜ್ಯ ಮಂಡಳಿಯ ಈ ಮರೆವಿಗೆ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ