ಕನ್ನಡ ಸಿನಿಮಾಗೆ ಐದು ರಾಷ್ಟ್ರಪ್ರಶಸ್ತಿ: ಯಾವೆಲ್ಲಾ ಪ್ರಶಸ್ತಿ ಇಲ್ಲಿದೆ ಲಿಸ್ಟ್

ಮಂಗಳವಾರ, 23 ಮಾರ್ಚ್ 2021 (09:48 IST)
ನವದೆಹಲಿ: 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸೇರಿದಂತೆ ಕನ್ನಡಕ್ಕೆ ಐದು ರಾಷ್ಟ್ರಪ್ರಶಸ್ತಿ ಲಭಿಸಿದೆ.

 

ಅವನೇ ಶ್ರೀಮನ್ನಾರಾಯಣ ಸಿನಿಮಾ ಶ್ರೇಷ್ಠ ಸಾಹಸ ಸಂಯೋಜನೆಗಾಗಿ ಪ್ರಶಸ್ತಿ ಪಡೆದಿದ್ದು, ‘ಅಕ್ಷಿ’ ಶ್ರೇಷ್ಠ ಕನ್ನಡ ಚಿತ್ರವೆಂಬ ಪ್ರಶಸ್ತಿಗೆ ಭಾಜನವಾಗಿದೆ. ಸಿನಿಮಾ ವಿಕಾಸದ ಕುರಿತಂತೆ ನಿರ್ದೇಶಕ ರಾಮದಾಸ್ ನಾಯ್ಡು ಬರೆದಿರುವ ಜಾಗತಿಕ ಸಿನಿಮಾ-ಪ್ರೇರಣೆ, ಪ್ರಭಾವ ಎಂಬ ಪುಸ್ತಕಕ್ಕೆ ಶ್ರೇಷ್ಠ ಸಿನಿಮಾ ವಿಮರ್ಶಾ ಗ್ರಂಥ ಪ್ರಶಸ್ತಿ ಲಭಿಸಿದೆ.  

ಅಮೋಘ ವರ್ಷ ನಿರ್ದೇಶನದ ‘ವೈಲ್ಡ್ ಲೈಫ್ ಕರ್ನಾಟಕ’ ಶ್ರೇಷ್ಠ ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಶ್ರೇಷ್ಠ ನಿರೂಪಣೆ ಪ್ರಶಸ್ತಿ, ‘ಪಿಂಗಾರ’ ಸಿನಿಮಾಗೆ ಶ್ರೇಷ್ಠ ತುಳು ಚಿತ್ರವೆಂಬ ಪ್ರಶಸ್ತಿ ಸಿಕ್ಕಿದೆ.

ಈ ಸಾಲಿನ  ಅತ್ಯುತ್ತಮ ನಟ ಪ್ರಶಸ್ತಿ ‘ಅಸುರನ್’ ಸಿನಿಮಾದ ಅಭಿನಯಕ್ಕಾಗಿ ತಮಿಳಿನ ಧನುಷ್, ‘ಭೋಂಸ್ಲೆ’ ಚಿತ್ರದ ಅಭಿನಯಕ್ಕಾಗಿ ಮನೋಜ್ ಭಾಜಪೇಯಿ ಹಾಗೂ ‘ಮಣಿರ್ಣಿಕಾ’ ಮತ್ತು ‘ಪಂಗಾ’ ಚಿತ್ರದ ಅಭಿನಯಕ್ಕಾಗಿ ಕಂಗನಾ ರನಾವತ್ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ