ಡ್ಯಾನ್ಸ್ ಶೋಗೆ ವಿನೋದ್ ರಾಜ್ ನನ್ನು ಕಡೆಗಣಿಸಿರುವುದಕ್ಕೆ ನಟ ಜಗ್ಗೇಶ್ ಆಕ್ರೋಶ

ಸೋಮವಾರ, 22 ಜುಲೈ 2019 (10:25 IST)
ಬೆಂಗಳೂರು: ಇತ್ತೀಚೆಗೆ ಟಿವಿ ವಾಹಿನಿಗಳಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳು ಎಷ್ಟೋ ಯುವ ಪ್ರತಿಭೆಗಳಿಗೆ ಅವಕಾಶವೇನೋ ನೀಡುತ್ತಿದೆ. ಆದರೆ ಈ ರಿಯಾಲಿಟಿ ಶೋಗಳಲ್ಲಿ ನೃತ್ಯದ ಗಂಧ ಗಾಳಿ ಗೊತ್ತಿಲ್ಲದವರನ್ನು ತೀರ್ಪುಗಾರರಾಗಿ ಕೂರಿಸುತ್ತಿರುವುದಕ್ಕೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅದರಲ್ಲೂ ಹಿರಿಯ ನಟಿ ಲೀಲಾವತಿ ಪುತ್ರ, ಡ್ಯಾನ್ಸ್ ಚತುರ ವಿನೋದ್ ರಾಜ್ ರನ್ನು ಕಡೆಗಣಿಸುತ್ತಿರುವುದಕ್ಕೆ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ‘ಇಂದಿನ ಡ್ಯಾನ್ಸ್ ಸ್ಟಾರ್ ಗಳು ಹುಟ್ಟು ಮೊದಲೇ ಅಂದರೆ 87 ರಲ್ಲೇ ಹುಚ್ಚೆಬ್ಬಿಸಿದ ಪ್ರತಿಭಾವಂತ ನಟ. ನಾಟ್ಯದ ವ್ಯಾಕರಣ ಅರಿಯದವರ ರಿಯಾಲಿಟಿ ಶೋ ತೀರ್ಪುಗಾರರಾಗಿ ಮಾಡುವ ಬದಲು ವಿನೋದ್ ರಾಜ್ ನ ಬಳಸಿ. ನಿಮ್ಮ ಶೋಗಳ ಘನತೆ ಹೆಚ್ಚುತ್ತೆ. ನನ್ನ ವೈಯಕ್ತಿಕ ಅಭಿಪ್ರಾಯ ಸತ್ಯವೆನಿಸಿದರೆ ಒಪ್ಪಿ, ಇಲ್ಲವಾದರೆ ನಕ್ಕುಬಿಡಿ’ ಎಂದು ಜಗ್ಗೇಶ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ