ಕಾಮಿಡಿ ಕಿಲಾಡಿಗಳು ನಯನಾ ಕನ್ನಡ ವಿವಾದ: ನೆರವಿಗೆ ಬಂದ ಜಗ್ಗೇಶ್
ಕನ್ನಡದ ಬಗ್ಗೆ ಕೇಳಿದ್ದಕ್ಕೆ ಈ ಮಟ್ಟಿಗೆ ಕಾಮೆಂಟ್ ಮಾಡಬೇಕಾಗಿರಲಿಲ್ಲ ಎಂದು ಹಲವರು ಆಕ್ಷೇಪಿಸಿದ್ದರು. ಈ ವಿವಾದದ ಬಗ್ಗೆ ಮಾತನಾಡಿರುವ ಜಗ್ಗೇಶ್ ‘ಈಕೆ ಇನ್ನೂ ಸೊಸೆ, ಅನುಭವದ ಅತ್ತೆ ಆಗಲು ಸಮಯ ಬೇಕು. ನಮ್ಮ ಕಾಲದಲ್ಲಿ ದಿನ ಹಾಗೂ ವಾರದ ಪತ್ರಿಕೆಯಲ್ಲಿ ಪ್ರತಿಕ್ರಿಯೆ ಬರುತ್ತಿತ್ತು. ಇಂದು ಅಂಗೈಯಲ್ಲೇ ಅಭಿಪ್ರಾಯ ಕುಟ್ಟುವ ಕೋಟ್ಯಂತರ ಪತ್ರಕರ್ತರಿದ್ದಾರೆ. ಹಾಗಾಗಿ ಎಚ್ಚರವಾಗಿ ಉತ್ತರಿಸಬೇಕು. ಇಲ್ಲದಿದ್ದರೆ ಗಮನಿಸದೆ ಮುಂದೆ ಹೋಗಬೇಕು. ಅನ್ಯರಿಗೆ ಉತ್ತರಿಸಿ ಕೂತರೆ ನಮ್ಮ ಗುರಿ ಶೂನ್ಯ. ಸಮಯ ವ್ಯರ್ಥ’ ಎಂದು ಪ್ರತಿಕ್ರಿಯಿಸಿದ್ದಾರೆ.