ಮತ್ತೊಂದು ಸಿನಿಮಾ ಚಿತ್ರೀಕರಣಕ್ಕೆ ಮೊದಲು ದೇವರ ಆಶೀರ್ವಾದ ಪಡೆಯಲು ಹೊರಟ ಜಗ್ಗೇಶ್

ಗುರುವಾರ, 5 ಆಗಸ್ಟ್ 2021 (09:50 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಈಗಷ್ಟೇ ತೋತಾಪುರಿ ಸಿನಿಮಾ ಮುಗಿಸಿಕೊಟ್ಟಿದ್ದಾರೆ. ಇದೀಗ ರಂಗನಾಯಕ ಸಿನಿಮಾಗೆ ಸಿದ್ಧವಾಗಿದ್ದಾರೆ.


ಮಠ ಸಿನಿಮಾ ಬಳಿಕ ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ಮಾಡುತ್ತಿರುವ ಸಿನಿಮಾ ‘ರಂಗನಾಯಕ’ ಈ ಸಿನಿಮಾ ಲಾಕ್ ಡೌನ್ ಗೂ ಮೊದಲೇ ಸೆಟ್ಟೇರಿತ್ತು.

ಇದೀಗ ಆಗಸ್ಟ್ 12 ರಿಂದ ಚಿತ್ರೀಕರಣ ಪ್ರಾರಂಭವಾಗುತ್ತಿರುವುದಾಗಿ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಅದಕ್ಕೂ ಮೊದಲು ಜಗ್ಗೇಶ್ ಪತ್ನಿ ಸಮೇತರಾಗಿ ಶಿರಸಿಗೆ ಪ್ರಯಾಣ ಬೆಳೆಸಿದ್ದು, ಮಾರಿಕಾಂಬೆಯ ದರ್ಶನ ಪಡೆದು ಬರುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ