ಡಾ. ರಾಜ್ ಹಾಡಿದ್ದ ಆ ಒಂದು ಹಾಡಿನ ಹಿಂದಿನ ಕತೆ ಹೇಳಿದ ಜಗ್ಗೇಶ್

ಮಂಗಳವಾರ, 21 ಜುಲೈ 2020 (11:30 IST)
ಬೆಂಗಳೂರು: ಕೆಲವು ದಿನಗಳ ಹಿಂದೆ ಡಾ.ರಾಜಕುಮಾರ್ ನಾಡದೇವತೆ ಚಾಮುಂಡೇಶ್ವರಿ ಬಗ್ಗೆ ಹಾಡಿದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಹಾಡು ಹಾಡಿದ ಸಂದರ್ಭದ ಬಗ್ಗೆ ನವರಸನಾಯಕ ಜಗ್ಗೇಶ್ ಕತೆಯೊಂದನ್ನು ಹೇಳಿದ್ದಾರೆ.


ಈ ಹಾಡು ಹಾಡಿದ ಮೂರು ದಿನಗಳ ಬಳಿಕ ಜಗ್ಗೇಶ್ ಅಣ್ಣಾವ್ರನ್ನು ನೋಡಲು ಅವರ ಮನೆಗೆ ಹೋಗಿದ್ದರಂತೆ. ಆದರೆ ಆಗ ಅವರು ಮಲಗಿದ್ದರಿಂದ ಭೇಟಿಯಾಗಲು ಸಾಧ‍್ಯವಾಗಿರಲಿಲ್ಲ. ಆದರೆ ಪಾರ್ವತಮ್ಮನವರು ಜಗ್ಗೇಶ್ ಜತೆ ಮಾತನಾಡುತ್ತಾ  ತುಂಬಾ ವರ್ಷಗಳ ಬಳಿಕ ಯಜಮಾನರು ಸಡನ್ ಆಗಿ ಈ ಹಾಡು ಹಾಡಿದರು. ನನಗೆ ತುಂಬಾ ಖುಷಿಯಾಗಿ ಹೋಯಿತು ಎಂದು ಪತಿಯ ಬಗ್ಗೆ ಹೇಳಿಕೊಂಡಿದ್ದರಂತೆ. ಈ ಹಾಡಿನ ನೆನಪುಗಳನ್ನು ಈಗ ಜಗ್ಗೇಶ್ ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ