ಕನ್ನಡ ಸ್ಟಾರ್ ನಟರು ಮಾಡುತ್ತಿರುವ ಈ ತಪ್ಪಿನಿಂದಲೇ ಪರಭಾಷಾ ಸಿನಿಮಾಗಳಿಗೆ ಲಾಭವಾಗುತ್ತಿದೆ

ಮಂಗಳವಾರ, 12 ಡಿಸೆಂಬರ್ 2023 (13:28 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಪರಭಾಷಾ ಸಿನಿಮಾಗಳು ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿರುವುದಕ್ಕೆ ನಮ್ಮ ಕನ್ನಡ ನಟರೂ ಕಾರಣ ಹೇಗೆ ಗೊತ್ತಾ?

ಕೆಜಿಎಫ್ ಬಳಿಕ ಎಲ್ಲಾ ಸ್ಟಾರ್ ನಟರು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಎಲ್ಲಾ ಸ್ಟಾರ್ ನಟರು ಬಿಗ್ ಬಜೆಟ್ ಸಿನಿಮಾಗಳ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಸಿನಿಮಾಗಳು ತಡವಾಗುತ್ತಿದೆ.

ಹಿಂದೆ ಕಿಚ್ಚ ಸುದೀಪ್, ಯಶ್, ದರ್ಶನ್ ಹೀಗೆ ಎಲ್ಲಾ ಸ್ಟಾರ್ ನಟರು ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡುತ್ತಿದ್ದರು. ಆದರೆ ಈಗ ಇದು ವರ್ಷಕ್ಕೊಮ್ಮೆ ಅಥವಾ, ಎರಡು ವರ್ಷಕ್ಕೊಮ್ಮೆ ಎಂಬಂತಾಗಿದೆ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗದೇ ಥಿಯೇಟರ್ ಗಳ ಕಡೆ ಜನ ಹೆಚ್ಚಾಗಿ ಬರುತ್ತಿಲ್ಲ.

ಹೀಗಾಗಿ ಪರಭಾಷಾ ಸ್ಟಾರ್ ನಟರ ಸಿನಿಮಾಗಳಿಗೆ ಜನ ಹೆಚ್ಚು ಒಲವು ತೋರುತ್ತಿದ್ದಾರೆ. ಇದರಿಂದ ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕರ ಜೇಬು ತುಂಬುತ್ತಿಲ್ಲ.

ಮಲಯಾಳಂ ಸ್ಟಾರ್ ನಟ ಮಮ್ಮುಟ್ಟಿ ತಮ್ಮ ಪುತ್ರ ದುಲ್ಕರ್ ಸಲ್ಮಾನ್ ಗೆ ವರ್ಷಕ್ಕೆ ಒಂದು ಸಿನಿಮಾ ಮಾಡುವುದಾದರೆ ಮನೆಗೇ ಬರಬೇಡ ಎಂದು ತಾಕೀತು ಮಾಡಿದ್ದರಂತೆ. ಹೆಚ್ಚು ಹೆಚ್ಚು ಸಿನಿಮಾ ಮಾಡಿದರೆ ಚಿತ್ರರಂಗ ಬೆಳೆಯುತ್ತದೆ ಎನ್ನುವುದು ಅವರ ಆಲೋಚನೆ. ಆದರೆ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿರುವ ಕನ್ನಡ ಸ್ಟಾರ್ ನಟರಿಂದಲೇ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ