ಇಂಥಾ ಜಾಹೀರಾತಿಗೆ ರಾಯಭಾರಿ ಆಗಬೇಡಿ ಎಂದು ಕಿಚ್ಚ ಸುದೀಪ್ ಗೆ ಅಭಿಮಾನಿಗಳ ತಾಕೀತು!

ಗುರುವಾರ, 9 ಜನವರಿ 2020 (09:52 IST)
ಬೆಂಗಳೂರು: ಕಿಚ್ಚ ಸುದೀಪ್ ಇತ್ತೀಚೆಗೆ ರಮ್ಮಿ ಸರ್ಕಲ್ ಎಂಬ ಗೇಮ್ ವೆಬ್ ಗೆ ರಾಯಭಾರಿಯಾಗಿ ಜಾಹೀರಾತಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಜಾಹೀರಾತಿನ ವಿಡಿಯೋ ಈಗ ಲಾಂಚ್ ಆಗಿದ್ದು ಅದನ್ನು ಕಿಚ್ಚ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ವಿಡಿಯೋ ಪ್ರಕಟಿಸಿ ರಮ್ಮಿ ಗೇಮ್ ಆಡಿ ಕ್ಯಾಶ್ ಗೆಲ್ಲಿ ಎಂದು ಬರೆದುಕೊಂಡಿದ್ದಾರೆ. ಆದರೆ ಸುದೀಪ್ ಇಂಥಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸ್ವಲ್ಪವೂ ಇಷ್ಟವಾಗಿಲ್ಲ.

ನಿನ್ನ ಅಭಿಮಾನಿಯಾಗಿ ಹೇಳುತ್ತೇವೆ. ಇಂಥಾ ಜಾಹೀರಾತಿನಲ್ಲಿ ನೀವು ಕಾಣಿಸಿಕೊಳ್ಳಬೇಡಿ ಅಣ್ಣ. ಇವೆಲ್ಲಾ ಫ್ರಾಡ್. ಹಣ ಹೂಡಿಕೆ ಮಾಡಿ ಆಡಿ ನೋಡಿ. ಆಮೇಲೆ ಇದರ ನಿಜ ಬಣ್ಣ ಗೊತ್ತಾಗುತ್ತದೆ. ಇಂತಹ ಸಮಾಜಕ್ಕೆ ಒಂಚೂರೂ ಉಪಯೋಗಕ್ಕೆ ಬಾರದ ಜಾಹೀರಾತುಗಳಿಗೆ ಇನ್ನು ರಾಯಭಾರಿಯಾಗಬೇಡಿ ಎಂದು ಪ್ರೀತಿಯಿಂದಲೇ ಕಿಚ್ಚನಿಗೆ ಅಭಿಮಾನಿಗಳು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ