ವಿಕ್ರಾಂತ್ ರೋಣ ಪಾರ್ಟ್ 2 ಗೆ ರೆಡಿಯಾಗ್ತಿದ್ದಾರೆ ಕಿಚ್ಚ-ಅನೂಪ್ ಭಂಡಾರಿ

ಶುಕ್ರವಾರ, 4 ಮಾರ್ಚ್ 2022 (08:50 IST)
ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾವನ್ನು ಭರ್ಜರಿಯಾಗಿ ಬಿಡುಗಡೆ ಮಾಡಲು ಸಿದ್ಧರಾಗಿರುವ ಬೆನ್ನಲ್ಲೇ ನಿರ್ದೇಶಕ ಅನೂಪ್ ಭಂಡಾರಿ ಈಗ ಎರಡನೇ ಭಾಗಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ವಿಕ್ರಾಂತ್ ರೋಣ ಎರಡನೇ ಭಾಗಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಬಿಲ್ಲ ರಂಗಾ ಭಾಷಾ, ಅಶ್ವತ್ಥಾಮ ಸಿನಿಮಾ ಟೈಟಲ್ ಅನೌನ್ಸ್ ಮಾಡಿರುವ ಅನೂಪ್ ಭಂಡಾರಿ ಇದರ ಜೊತೆಗೆ ವಿಕ್ರಾಂತ್ ರೋಣ 2 ಸ್ಕ್ರಿಪ್ಟ್ ಕೂಡಾ ರೆಡಿ ಮಾಡಿಕೊಂಡಿದ್ದಾರಂತೆ.

ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮೊನ್ನೆ ಅಪ್ ಡೇಟ್ ಕೊಡುವ ವೇಳೆ ಇದು ಕೇವಲ ಆರಂಭ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಹೀಗಾಗಿ ಇದು ಎರಡನೇ ಭಾಗ ಮಾಡುತ್ತಿರುವುದರ ಸೂಚನೆ ಎಂದೇ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ